<p><strong>ಮೂಲ್ಕಿ:</strong> ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಜಂಕ್ಷನ್ನಿಂದ ಕೊಲ್ನಾಡು ಜಂಕ್ಷನ್ವರೆಗೆ 5 ಅಪಾಯಕಾರಿ ವಲಯಗಳ ಸಮಸ್ಯೆ ನಿವಾರಣೆಗೆ ಸಂಬಂಧಿಸಿ ಮೂಲ್ಕಿಯ ಎಂಜಿನಿಯರ್ ಮೂಲ್ಕಿ ಜೀವನ್ ಕೆ.ಶೆಟ್ಟಿ ಅವರು ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಇಂಡಿಯನ್ ರೋಡ್ ಕಾಂಗ್ರೆಸ್ನ 82ನೇ ಸಭೆಯಲ್ಲಿ ಮನವಿ ಸಲ್ಲಿಸಿದರು.</p>.<p>ಗುಜರಾತ್ ಗಾಂಧಿ ನಗರದಲ್ಲಿ ನಡೆದ ಸಭೆಯಲ್ಲಿ ಮೂಲ್ಕಿಯ ಶಾರದಾ ಇನ್ಫ್ರಾ ಡಿಸೈನ್ ಇಂಡಿಯ ಸಂಸ್ಥೆಯ ಆಡಳಿತ ನಿರ್ದೇಶಕ , ಇಂಡಿಯನ್ ರೋಡ್ ಕಾಂಗ್ರೆಸ್ ಸದಸ್ಯ ಜೀವನ್ ಕೆ.ಶೆಟ್ಟಿ ಅವರು, ಅಪಾಯಕಾರಿ ವಲಯಗಳಲ್ಲಿ ಪರ್ಯಾಯವಾಗಿ ಅಂಡರ್ ಪಾಸ್ ಮತ್ತು ಬಪ್ಪನಾಡು ಶಾಂಭವಿ ಸೇತುವೆಯಿಂದ ಕೊಲ್ನಾಡು ಜಂಕ್ಷನ್ವರೆಗೆ ಸರ್ವಿಸ್ ರಸ್ತೆಯ ಅಗತ್ಯದ ಬಗ್ಗೆ ಪ್ರಸ್ತಾವಿಸಿದರು.</p>.<p>ಹೆದ್ದಾರಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ನಿರ್ಮಲ್ ಅವರಿಗೆ ಮನವಿ ನೀಡಿದರು.</p>.<p>ಇದಕ್ಕೆ ಸ್ಪಂದಿಸಿದ ಅವರು ಎನ್ಎಚ್ಐಎ ಅಧ್ಯಕ್ಷರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.</p>.<p>ಹೆದ್ದಾರಿ ಸಚಿವಾಲಯದ ಮುಖ್ಯ ಎಂಜಿನಿಯರ್ ಪಂಕಜ್ ಅಗರ್ವಾಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಲ್ಕಿ:</strong> ರಾಷ್ಟ್ರೀಯ ಹೆದ್ದಾರಿ 66ರ ಬಪ್ಪನಾಡು ಜಂಕ್ಷನ್ನಿಂದ ಕೊಲ್ನಾಡು ಜಂಕ್ಷನ್ವರೆಗೆ 5 ಅಪಾಯಕಾರಿ ವಲಯಗಳ ಸಮಸ್ಯೆ ನಿವಾರಣೆಗೆ ಸಂಬಂಧಿಸಿ ಮೂಲ್ಕಿಯ ಎಂಜಿನಿಯರ್ ಮೂಲ್ಕಿ ಜೀವನ್ ಕೆ.ಶೆಟ್ಟಿ ಅವರು ಕೇಂದ್ರ ಸರ್ಕಾರದ ರಾಷ್ಟ್ರೀಯ ಹೆದ್ದಾರಿ ಸಚಿವಾಲಯದ ಇಂಡಿಯನ್ ರೋಡ್ ಕಾಂಗ್ರೆಸ್ನ 82ನೇ ಸಭೆಯಲ್ಲಿ ಮನವಿ ಸಲ್ಲಿಸಿದರು.</p>.<p>ಗುಜರಾತ್ ಗಾಂಧಿ ನಗರದಲ್ಲಿ ನಡೆದ ಸಭೆಯಲ್ಲಿ ಮೂಲ್ಕಿಯ ಶಾರದಾ ಇನ್ಫ್ರಾ ಡಿಸೈನ್ ಇಂಡಿಯ ಸಂಸ್ಥೆಯ ಆಡಳಿತ ನಿರ್ದೇಶಕ , ಇಂಡಿಯನ್ ರೋಡ್ ಕಾಂಗ್ರೆಸ್ ಸದಸ್ಯ ಜೀವನ್ ಕೆ.ಶೆಟ್ಟಿ ಅವರು, ಅಪಾಯಕಾರಿ ವಲಯಗಳಲ್ಲಿ ಪರ್ಯಾಯವಾಗಿ ಅಂಡರ್ ಪಾಸ್ ಮತ್ತು ಬಪ್ಪನಾಡು ಶಾಂಭವಿ ಸೇತುವೆಯಿಂದ ಕೊಲ್ನಾಡು ಜಂಕ್ಷನ್ವರೆಗೆ ಸರ್ವಿಸ್ ರಸ್ತೆಯ ಅಗತ್ಯದ ಬಗ್ಗೆ ಪ್ರಸ್ತಾವಿಸಿದರು.</p>.<p>ಹೆದ್ದಾರಿ ಸಚಿವಾಲಯದ ಪ್ರಧಾನ ಕಾರ್ಯದರ್ಶಿ ಎಸ್.ಕೆ.ನಿರ್ಮಲ್ ಅವರಿಗೆ ಮನವಿ ನೀಡಿದರು.</p>.<p>ಇದಕ್ಕೆ ಸ್ಪಂದಿಸಿದ ಅವರು ಎನ್ಎಚ್ಐಎ ಅಧ್ಯಕ್ಷರ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.</p>.<p>ಹೆದ್ದಾರಿ ಸಚಿವಾಲಯದ ಮುಖ್ಯ ಎಂಜಿನಿಯರ್ ಪಂಕಜ್ ಅಗರ್ವಾಲ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>