ಇತ್ತೀಚಿನ ವರ್ಷಗಳಲ್ಲಿ ಕರ್ನಾಟಕ ಸರ್ಕಾರವು ಕಾಸರಗೋಡು ಕನ್ನಡಿಗರಿಗೆ, ಕರ್ನಾಟಕದಲ್ಲಿ ಕನ್ನಡಿಗರಿಗೆ ಸಿಗುವ ಎಲ್ಲ ಶೈಕ್ಷಣಿಕ, ಸಾಂಸ್ಕೃತಿಕ, ಔದ್ಯೋಗಿಕ ಸವಲತ್ತುಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸಿನ ಮೇರೆಗೆ ಈ ಪ್ರದೇಶದ ಕನ್ನಡಿಗರಿಗೆ ಒದಗಿಸಿತ್ತು. ಕೇರಳ ಸರ್ಕಾರ ಕಾಸರಗೋಡನ್ನು ಆಡಳಿತಾತ್ಮಕವಾಗಿ ವಿಭಜಿಸುವ ಸಂದರ್ಭ ಮಂಜೇಶ್ವರವನ್ನು ಪ್ರತ್ಯೇಕ ತಾಲ್ಲೂಕಾಗಿ ಮಾಡಲಾಗಿತ್ತು. ಆದರೆ, ಮಂಜೇಶ್ವರ ತಾಲ್ಲೂಕಿಗೆ ಕನ್ನಡ ಭಾಷಾ ಪ್ರದೇಶ ಸ್ಥಾನಮಾನದ ಸವಲತ್ತು ಲಭಿಸಿರಲಿಲ್ಲ. ಸಹಜವಾಗಿ ಅಲ್ಲಿನ ಕನ್ನಡಿಗರು ತಾಂತ್ರಿಕ ನೆಲೆಯಲ್ಲಿ ಸೌಲಭ್ಯಗಳಿಂದ ವಂಚಿತರಾಗಿದ್ದರು ಎಂದು ತಿಳಿಸಿದ್ದಾರೆ.