<p><strong>ಉಪ್ಪಿನಂಗಡಿ:</strong> ಇಲ್ಲಿಗೆ ಸಮೀಪದ ಪಾದಾಳ ಎಂಬಲ್ಲಿ ನೂಜಿ-ಅರ್ತಿಲ ರಸ್ತೆ ಬದಿಯ ಧರೆ ಕಳೆದ ಮಳೆಗಾಲದಲ್ಲಿ ಭಾಗಶಃ ಕುಸಿದಿದ್ದು, ಧರೆಗೆ ತಾಗಿಕೊಂಡು ಇರುವ ಮನೆಯ ಸದಸ್ಯರು ಆತಂಕಕ್ಕೀಡಾಗಿದ್ದಾರೆ. ಸಮಸ್ಯೆಗೆ ಪರಿಹಾರ ನೀಡುವಂತೆ ಕೋರಿ ವರ್ಷದ ಹಿಂದೆಯೇ ಮನವಿ ಸಲ್ಲಿಸಿದ್ದು, ಯಾರೂ ಸ್ಪಂದಿಸಿಲ್ಲ.</p>.<p>ಪಾದಾಳದ ಸುರೇಶ್ ಶೆಟ್ಟಿ ಎಂಬುವರ ಮನೆ ಬದಿಯಲ್ಲಿರುವ ಧರೆ ಕುಸಿತಕ್ಕೊಳಗಾಗಿತ್ತು. ಬಂಡೆ ಕಲ್ಲುಗಳು ಅವರ ಮನೆ ಅಂಗಳಕ್ಕೆ ಬೀಳುತ್ತಿದ್ದು, ಅವರ ಪಂಪ್ ಹೌಸ್ಗೆ ಹಾನಿಯಾಗಿತ್ತು. ಧರೆಯ ಮೇಲ್ಭಾಗದಲ್ಲಿ ನೂಜಿ-ಅರ್ತಿಲ ಸಂಪರ್ಕ ರಸ್ತೆ ಇದ್ದು, ಇದರ ಅಂಚಿನ ವರೆಗೆ ಧರೆ ಕುಸಿದಿದೆ. ಧರೆ ಇನ್ನಷ್ಟು ಕುಸಿದರೆ ಕಾಂಕ್ರೀಟ್ ರಸ್ತೆಯೂ ಕುಸಿದು ಸಾಧ್ಯತೆ ಇದೆ.</p>.<p>ಸಂಭವನೀಯ ಅಪಾಯ ತಡೆಯಲು ತಡೆಗೋಡೆ ನಿರ್ಮಿಸುವಂತೆ ಸುರೇಶ್ ಶೆಟ್ಟಿ ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶಾಸಕರು ‘ತಡೆಗೋಡೆ ನಿರ್ಮಾಣಕ್ಕೆ ಅನುದಾನ ಇಲ್ಲ, ಮುಂದಿನ ವರ್ಷದಲ್ಲಿ ಅದನ್ನು ಸೇರ್ಪಡೆ ಮಾಡಬಹುದು’ ಎಂದು ಸೂಚಿಸಿದ್ದರು.</p>.<p>ಸಂಭವನೀಯ ದುರಂತ ತಪ್ಪಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಎ.ಕೃಷ್ಣ ರಾವ್ ಅರ್ತಿಲ ಆಗ್ರಹಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಉಪ್ಪಿನಂಗಡಿ:</strong> ಇಲ್ಲಿಗೆ ಸಮೀಪದ ಪಾದಾಳ ಎಂಬಲ್ಲಿ ನೂಜಿ-ಅರ್ತಿಲ ರಸ್ತೆ ಬದಿಯ ಧರೆ ಕಳೆದ ಮಳೆಗಾಲದಲ್ಲಿ ಭಾಗಶಃ ಕುಸಿದಿದ್ದು, ಧರೆಗೆ ತಾಗಿಕೊಂಡು ಇರುವ ಮನೆಯ ಸದಸ್ಯರು ಆತಂಕಕ್ಕೀಡಾಗಿದ್ದಾರೆ. ಸಮಸ್ಯೆಗೆ ಪರಿಹಾರ ನೀಡುವಂತೆ ಕೋರಿ ವರ್ಷದ ಹಿಂದೆಯೇ ಮನವಿ ಸಲ್ಲಿಸಿದ್ದು, ಯಾರೂ ಸ್ಪಂದಿಸಿಲ್ಲ.</p>.<p>ಪಾದಾಳದ ಸುರೇಶ್ ಶೆಟ್ಟಿ ಎಂಬುವರ ಮನೆ ಬದಿಯಲ್ಲಿರುವ ಧರೆ ಕುಸಿತಕ್ಕೊಳಗಾಗಿತ್ತು. ಬಂಡೆ ಕಲ್ಲುಗಳು ಅವರ ಮನೆ ಅಂಗಳಕ್ಕೆ ಬೀಳುತ್ತಿದ್ದು, ಅವರ ಪಂಪ್ ಹೌಸ್ಗೆ ಹಾನಿಯಾಗಿತ್ತು. ಧರೆಯ ಮೇಲ್ಭಾಗದಲ್ಲಿ ನೂಜಿ-ಅರ್ತಿಲ ಸಂಪರ್ಕ ರಸ್ತೆ ಇದ್ದು, ಇದರ ಅಂಚಿನ ವರೆಗೆ ಧರೆ ಕುಸಿದಿದೆ. ಧರೆ ಇನ್ನಷ್ಟು ಕುಸಿದರೆ ಕಾಂಕ್ರೀಟ್ ರಸ್ತೆಯೂ ಕುಸಿದು ಸಾಧ್ಯತೆ ಇದೆ.</p>.<p>ಸಂಭವನೀಯ ಅಪಾಯ ತಡೆಯಲು ತಡೆಗೋಡೆ ನಿರ್ಮಿಸುವಂತೆ ಸುರೇಶ್ ಶೆಟ್ಟಿ ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು. ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವಂತೆ ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮಕ್ಕೆ ಶಾಸಕರು ಪ್ರಸ್ತಾವನೆ ಸಲ್ಲಿಸಿದ್ದರು. ಈ ಬಗ್ಗೆ ಪ್ರತಿಕ್ರಿಯಿಸಿದ್ದ ಶಾಸಕರು ‘ತಡೆಗೋಡೆ ನಿರ್ಮಾಣಕ್ಕೆ ಅನುದಾನ ಇಲ್ಲ, ಮುಂದಿನ ವರ್ಷದಲ್ಲಿ ಅದನ್ನು ಸೇರ್ಪಡೆ ಮಾಡಬಹುದು’ ಎಂದು ಸೂಚಿಸಿದ್ದರು.</p>.<p>ಸಂಭವನೀಯ ದುರಂತ ತಪ್ಪಿಸಲು ಸಂಬಂಧಿಸಿದ ಅಧಿಕಾರಿಗಳು ಕ್ರಮಕೈಗೊಳ್ಳಬೇಕು ಎಂದು ಸಹಸ್ರಲಿಂಗೇಶ್ವರ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಸದಸ್ಯ ಎ.ಕೃಷ್ಣ ರಾವ್ ಅರ್ತಿಲ ಆಗ್ರಹಿಸಿದ್ದಾರೆ. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>