ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಲಯನ್ಸ್ ವಲಯ 11 ಅಧ್ಯಕ್ಷ ಎಂ.ಶೇಖರ ಪೂಜಾರಿ, ‘ಮಂಗಳೂರಿನ ಕಂಕನಾಡಿ–ಪಡೀಲ್, ಕಾವೂರು, ಮುದುರೆಮುಖ, ಕಾವೇರಿ, ಮಿಡ್ಟೌನ್, ಲೇಡಿಹಿಲ್, ವೆಲೆನ್ಸಿಯಾ, ಸರಸ್ವತಿ, ಪಂಪ್ವೆಲ್– ಕಲ್ಪವೃಕ್ಷಾ ಕ್ಲಬ್ಗಳು ಮಂಗಳೂರು ವಲಯದಲ್ಲಿದ್ದು, ಇಲ್ಲಿನ ಲಯನ್ಸ್ ಕುಟುಂಬದ 800 ಮಂದಿ ಈ ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ. ಸಮುದಾಯವನ್ನು ಬಲಪಡಿಸುವ ಹಾಗೂ ಬಡವರಿಗೆ ನೆರವಾಗುವ ನಮ್ಮ ಸಂಸ್ಥೆಯ ಧ್ಯೇಯದ ಪ್ರಕಾರ ಅನೇಕ ಸೇವಾ ಚಟುವಟಿಕೆಯನ್ನೂ ಈ ಸಂದರ್ಭದಲ್ಲಿ ಕೈಗೊಳ್ಳಲಿದ್ದೇವೆ’ ಎಂದರು.