ಕೇರಳದಿಂದ ಬರುವವರು ಆರ್ಟಿ–ಪಿಸಿಆರ್ ವಿಧಾನದ ಪರೀಕ್ಷೆಯಲ್ಲಿ 72 ಗಂಟೆಗಳಿಗೂ ಮೊದಲು ಪಡೆದಿರುವ ‘ನೆಗೆಟಿವ್’ ವರದಿ ಹೊಂದಿರುವುದು ಕಡ್ಡಾಯ. ವರದಿ ಹೊಂದಿರುವವರಿಗೆ ಮಾತ್ರವೇ ವಿಮಾನ, ಬಸ್ ಮತ್ತು ರೈಲುಗಳಲ್ಲಿ ಪ್ರಯಾಣಿಸಲು ಅವಕಾಶ ಕಲ್ಪಿಸಬೇಕು. ದಕ್ಷಿಣ ಕನ್ನಡ, ಕೊಡಗು, ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಯ ಅಂತರರಾಜ್ಯ ಗಡಿಗಳಲ್ಲಿ ತನಿಖಾ ಠಾಣೆಗಳನ್ನು ತೆರೆದು, ರಾಜ್ಯಕ್ಕೆ ಬರುವವರ ತಪಾಸಣೆ ನಡೆಸಬೇಕು ಎಂದು ಆದೇಶದಲ್ಲಿ ನಿರ್ದೇಶನ ನೀಡಿದ್ದಾರೆ.