ಶಾಲೆಗೆ ಹೋಗುವುದೇ ದುಸ್ತರವಾದಾಗ, ಛಲ ತೊಟ್ಟ ತಂದೆ ವಿದ್ಯಾಭ್ಯಾಸ ಕೊಡಿಸಿದ್ದರು. ಪೋಷಕರ ಇಚ್ಛೆಗೆಸ್ಪಂದಿಸಿದ ಪ್ರದೀಪ್ ಎಸ್ಸೆಸ್ಸೆಲ್ಸಿಯಲ್ಲಿ 518 ಅಂಕ ಪಡೆದರು. ಮಗನ ಕಲಿಕೆಯ ಆಸಕ್ತಿಗೆ ಬೆನ್ನೆಲುಬಾದ ತಂದೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ತಾನು ನಿರ್ವಹಿಸುತ್ತಿದ್ದ ಮೇಲ್ವಿಚಾರಕ ಹುದ್ದೆಗೆ ರಾಜೀನಾಮೆ ಕೊಟ್ಟು ಮಗನಿಗೆ ಸಹಾಯಕನಾಗಿ ನಿಂತಿದ್ದರು.