ಮಂಗಳೂರು: ನಗರ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶನಿವಾರ ಸಂಜೆ ಅರ್ಧತಾಸು ಗುಡುಗು–ಮಿಂಚು ಸಹಿತ ಮಳೆಯಾಯಿತು. ಸೆಕೆಯ ತಾಪದಿಂದ ಕಂಗೆಟ್ಟಿದ್ದ ಜನರು ಕೊಂಚ ನಿಟ್ಟುಸಿರು ಬಿಟ್ಟರು.
ಗಾಳಿಯ ಜತೆಗೆ ಗುಡುಗು– ಸಿಡಿಲಿನ ಅಬ್ಬರವೂ ಜೋರಾಗಿತ್ತು. ಪೇಟೆಗೆ ತೆರಳಿದ್ದ ಜನರು ಏಕಾಏಕಿ ಮಳೆಯಿಂದ, ಸಮೀಪದ ಅಂಗಡಿ ಮುಂಗಟ್ಟುಗಳಲ್ಲಿ ಆಶ್ರಯ ಪಡೆದರು. ಸುರತ್ಕಲ್ ಸುತ್ತಮುತ್ತ, ಕೃಷ್ಣಾಪುರ, ಕಾಟಿಪಳ್ಳ, ಬೈಕಂಪಾಡಿ ಭಾಗದಲ್ಲೂ ಮಳೆಯಾಗಿದೆ. ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಶನಿವಾರ ಸಂಜೆ ಮಳೆಯಾಗಿದೆ.