<p><strong>ಮೂಡುಬಿದಿರೆ:</strong> ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಪುಚ್ಚೆಮೊಗರು ಕಿಂಡಿ ಅಣೆಕಟ್ಟೆಯಲ್ಲಿ ಇದುವರೆಗೆ ನೀರಿನ ಕೊರತೆ ಉಂಟಾಗಿಲ್ಲ. ಈ ಬಾರಿಯ ಬೇಸಿಗೆಯಲ್ಲಿ ನಗರವಾಸಿಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>ಪುಚ್ಚೆಮೊಗರು ನದಿಯಲ್ಲಿ ಸದ್ಯ 4 ಮೀಟರ್ನಷ್ಟು ನೀರಿನ ಸಂಗ್ರಹ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಪ್ರಮಾಣದಲ್ಲೇ ನೀರಿನ ಸಂಗ್ರಹ ಇದೆ. ಸಮೀಪದಲ್ಲಿರುವ ‘ಸೋಹಂ ಪವರ್ ಪ್ರಾಜೆಕ್ಟ್’ ವಿದ್ಯುತ್ ಯೋಜನೆಯವರು ಸಂಗ್ರಹಿಸಿಡುವ ನೀರನ್ನು ತುರ್ತು ಸಂದರ್ಭದಲ್ಲಿ ಬಿಡುವುದರಿಂದ ಪುಚ್ಚೆಮಮೊಗರು ಅಣೆಕಟ್ಟೆಯಲ್ಲಿ ನೀರು ಸಂಗ್ರಹಕ್ಕೆ ಅನುಕೂಲವಾಗಿದೆ. ಪುರಸಭೆ ಸೂಚನೆಯಂತೆ ಕೆಲವು ವರ್ಷಗಳಿಂದ ‘ಸೋಹಂ ಪವರ್ ಪ್ರಾಜೆಕ್ಟ್’ನಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ.</p>.<p>ಪುರಸಭೆ ವ್ಯಾಪ್ತಿಯಲ್ಲಿ ಸದ್ಯ 6,810 ಗೃಹಬಳಕೆ ಮತ್ತು 474 ವಾಣಿಜ್ಯ ಬಳಕೆಯ ನೀರಿನ ಸಂಪರ್ಕಗಳಿವೆ. ಈ ಪೈಕಿ ಹೆಚ್ಚಿನ ನೀರಿನ ಬಳಕೆದಾರರಿಗೆ ಪುಚ್ಚಮೊಗರು ಅಣೆಟ್ಟೆಯಿಂದ ನೇರವಾಗಿ ಸರಬರಾಜು ಆಗುತ್ತಿದೆ. ಈಗಾಗಲೇ 173 ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು, ಇವುಗಳ ಮೂಲಕವು ನೀರು ಸರಬರಾಜು ಮಾಡಲಾಗುತ್ತಿದೆ.</p>.<p>ಎರಡು ವರ್ಷಗಳಿಂದ ಪುಚ್ಚೆಮೊಗರಿನ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಇರಲಿಲ್ಲ. ಮಳೆ ವಿಳಂಬವಾದರೆ ಈ ಬಾರಿ ಸಮಸ್ಯೆ ಉಂಟಾಗಬಹುದು. ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ನೀರಿನ ಸಮಸ್ಯೆ ಉಂಟಾದಲ್ಲಿ ಪುರಸಭೆಯು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತದೆ.</p>.<div><blockquote>ಪುಚ್ಚೆಮೊಗರು ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಇರುವುದರಿಂದ ಪುರಸಭೆ ವ್ಯಾಪ್ತಿಯಲ್ಲಿ ಸದ್ಯ ಕುಡಿಯುವ ನೀರಿನ ಕೊರತೆ ಇಲ್ಲ. ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗದಂತೆ ಮುಂಜಾಗೃತೆ ಕ್ರಮ ಕೈಗೊಳ್ಳಲಾಗಿದೆ ಇಂದು </blockquote><span class="attribution">ಎಂ. ಮುಖ್ಯಾಧಿಕಾರಿ ಪುರಸಭೆ ಮೂಡುಬಿದಿರೆ</span></div>.<p> <strong>ಬೋರ್ವೆಲ್ ಕೊರೆಸಿ</strong> </p><p>ಪರ್ಯಾಯ ವ್ಯವಸ್ಥೆ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರಿಂದ ನೀರಿನ ಅಗತ್ಯತೆಯೂ ಹೆಚ್ಚುತ್ತಿದೆ. ಇದಕ್ಕೆ ಹೊಸ ಬೋರ್ವೆಲ್ ಕೊರೆಯವ ಮೂಲಕ ಪುರಸಭೆ ಪರ್ಯಾಯ ವ್ಯವಸ್ಥೆ ಮಾಡುತ್ತಿದೆ. ಈ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗದಂತೆ 7 ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಪುರಸಭೆ ಮುಂದಾಗಿದೆ. ಕರಿಂಜೆ ಕಲ್ಲಬೆಟ್ಟು ಗ್ರಾಮದ ಧವಳ ನಗರದಲ್ಲಿ ಕೊಳವೆ ಬಾವಿ ಬತ್ತಿರುವುದರಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯಾಗುತ್ತಿದೆ. ಉಳಿದಂತೆ ಇತರ ಕಡೆಗಳಲ್ಲಿ ಈ ಬಾರಿ ಇದುವರೆಗೆ ಸಮಸ್ಯೆ ಎದುರಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮೂಡುಬಿದಿರೆ:</strong> ಪಟ್ಟಣಕ್ಕೆ ಕುಡಿಯುವ ನೀರು ಪೂರೈಕೆ ಮಾಡುವ ಪುಚ್ಚೆಮೊಗರು ಕಿಂಡಿ ಅಣೆಕಟ್ಟೆಯಲ್ಲಿ ಇದುವರೆಗೆ ನೀರಿನ ಕೊರತೆ ಉಂಟಾಗಿಲ್ಲ. ಈ ಬಾರಿಯ ಬೇಸಿಗೆಯಲ್ಲಿ ನಗರವಾಸಿಗಳಿಗೆ ಕುಡಿಯುವ ನೀರಿನ ಕೊರತೆ ಉಂಟಾಗುವ ಸಾಧ್ಯತೆ ಕಡಿಮೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.</p>.<p>ಪುಚ್ಚೆಮೊಗರು ನದಿಯಲ್ಲಿ ಸದ್ಯ 4 ಮೀಟರ್ನಷ್ಟು ನೀರಿನ ಸಂಗ್ರಹ ಇದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ಹೆಚ್ಚಿನ ಪ್ರಮಾಣದಲ್ಲೇ ನೀರಿನ ಸಂಗ್ರಹ ಇದೆ. ಸಮೀಪದಲ್ಲಿರುವ ‘ಸೋಹಂ ಪವರ್ ಪ್ರಾಜೆಕ್ಟ್’ ವಿದ್ಯುತ್ ಯೋಜನೆಯವರು ಸಂಗ್ರಹಿಸಿಡುವ ನೀರನ್ನು ತುರ್ತು ಸಂದರ್ಭದಲ್ಲಿ ಬಿಡುವುದರಿಂದ ಪುಚ್ಚೆಮಮೊಗರು ಅಣೆಕಟ್ಟೆಯಲ್ಲಿ ನೀರು ಸಂಗ್ರಹಕ್ಕೆ ಅನುಕೂಲವಾಗಿದೆ. ಪುರಸಭೆ ಸೂಚನೆಯಂತೆ ಕೆಲವು ವರ್ಷಗಳಿಂದ ‘ಸೋಹಂ ಪವರ್ ಪ್ರಾಜೆಕ್ಟ್’ನಲ್ಲಿ ಈ ವ್ಯವಸ್ಥೆ ಜಾರಿಯಲ್ಲಿದೆ.</p>.<p>ಪುರಸಭೆ ವ್ಯಾಪ್ತಿಯಲ್ಲಿ ಸದ್ಯ 6,810 ಗೃಹಬಳಕೆ ಮತ್ತು 474 ವಾಣಿಜ್ಯ ಬಳಕೆಯ ನೀರಿನ ಸಂಪರ್ಕಗಳಿವೆ. ಈ ಪೈಕಿ ಹೆಚ್ಚಿನ ನೀರಿನ ಬಳಕೆದಾರರಿಗೆ ಪುಚ್ಚಮೊಗರು ಅಣೆಟ್ಟೆಯಿಂದ ನೇರವಾಗಿ ಸರಬರಾಜು ಆಗುತ್ತಿದೆ. ಈಗಾಗಲೇ 173 ಕೊಳವೆ ಬಾವಿಗಳನ್ನು ಕೊರೆಯಲಾಗಿದ್ದು, ಇವುಗಳ ಮೂಲಕವು ನೀರು ಸರಬರಾಜು ಮಾಡಲಾಗುತ್ತಿದೆ.</p>.<p>ಎರಡು ವರ್ಷಗಳಿಂದ ಪುಚ್ಚೆಮೊಗರಿನ ಅಣೆಕಟ್ಟೆಯಲ್ಲಿ ನೀರಿನ ಕೊರತೆ ಇರಲಿಲ್ಲ. ಮಳೆ ವಿಳಂಬವಾದರೆ ಈ ಬಾರಿ ಸಮಸ್ಯೆ ಉಂಟಾಗಬಹುದು. ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ನೀರಿನ ಸಮಸ್ಯೆ ಉಂಟಾಗುತ್ತದೆ. ನೀರಿನ ಸಮಸ್ಯೆ ಉಂಟಾದಲ್ಲಿ ಪುರಸಭೆಯು ನಗರಕ್ಕೆ ಎರಡು ದಿನಕ್ಕೊಮ್ಮೆ ನೀರು ಪೂರೈಕೆ ಮಾಡುತ್ತದೆ.</p>.<div><blockquote>ಪುಚ್ಚೆಮೊಗರು ಅಣೆಕಟ್ಟೆಯಲ್ಲಿ ನೀರಿನ ಸಂಗ್ರಹ ಇರುವುದರಿಂದ ಪುರಸಭೆ ವ್ಯಾಪ್ತಿಯಲ್ಲಿ ಸದ್ಯ ಕುಡಿಯುವ ನೀರಿನ ಕೊರತೆ ಇಲ್ಲ. ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗದಂತೆ ಮುಂಜಾಗೃತೆ ಕ್ರಮ ಕೈಗೊಳ್ಳಲಾಗಿದೆ ಇಂದು </blockquote><span class="attribution">ಎಂ. ಮುಖ್ಯಾಧಿಕಾರಿ ಪುರಸಭೆ ಮೂಡುಬಿದಿರೆ</span></div>.<p> <strong>ಬೋರ್ವೆಲ್ ಕೊರೆಸಿ</strong> </p><p>ಪರ್ಯಾಯ ವ್ಯವಸ್ಥೆ ವಸತಿ ಮತ್ತು ವಾಣಿಜ್ಯ ಸಂಕೀರ್ಣಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವುದರಿಂದ ನೀರಿನ ಅಗತ್ಯತೆಯೂ ಹೆಚ್ಚುತ್ತಿದೆ. ಇದಕ್ಕೆ ಹೊಸ ಬೋರ್ವೆಲ್ ಕೊರೆಯವ ಮೂಲಕ ಪುರಸಭೆ ಪರ್ಯಾಯ ವ್ಯವಸ್ಥೆ ಮಾಡುತ್ತಿದೆ. ಈ ಬೇಸಿಗೆಯಲ್ಲಿ ನೀರಿನ ಕೊರತೆ ಉಂಟಾಗದಂತೆ 7 ಹೊಸ ಕೊಳವೆ ಬಾವಿಗಳನ್ನು ಕೊರೆಯಲು ಪುರಸಭೆ ಮುಂದಾಗಿದೆ. ಕರಿಂಜೆ ಕಲ್ಲಬೆಟ್ಟು ಗ್ರಾಮದ ಧವಳ ನಗರದಲ್ಲಿ ಕೊಳವೆ ಬಾವಿ ಬತ್ತಿರುವುದರಿಂದ ನೀರಿನ ಪೂರೈಕೆಯಲ್ಲಿ ವ್ಯತ್ಯಯಾಗುತ್ತಿದೆ. ಉಳಿದಂತೆ ಇತರ ಕಡೆಗಳಲ್ಲಿ ಈ ಬಾರಿ ಇದುವರೆಗೆ ಸಮಸ್ಯೆ ಎದುರಾಗಿಲ್ಲ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>