ತೋಕೂರಿನಲ್ಲಿ ಹಿಂದೂಸ್ಥಾನಿ ಸರ್ಕಾರಿ ಶಾಲೆಯ ಬಳಿ ಮರ ಮುರಿದು ಬಿದ್ದು, ವಿದ್ಯುತ್ ಕಂಬಕ್ಕೆ ಹಾನಿಯಾಗಿದೆ. ರಸ್ತೆ ಪಕ್ಕದ ಪುರುಷೋತ್ತಮ ಕೋಟ್ಯಾನ್ ಅವರಿಗೆ ಸೇರಿದ ಆವರಣ ಗೋಡೆಗೆ ಹಾನಿಯಾಗಿದ್ದು, ಕಂದಾಯ ಅಧಿಕಾರಿ ಮೋಹನ್ ಭೇಟಿ ನೀಡಿದರು. ಮೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಸರಿಪಡಿಸುವಲ್ಲಿ ಶ್ರಮಿಸಿದರು.