‘ಅಧಿಕಾರ ಹಿಡಿಯಬೇಕೆನ್ನುವ ಕಾರಣಕ್ಕಾಗಿ ಭಾಜಪದ ಗಂಧ–ಗಾಳಿ ಗೊತ್ತಿಲ್ಲದ, ಹಾದಿ ಬೀದಿಯಲ್ಲಿರುವ ಬೆರಕೆಗಳನ್ನೆಲ್ಲ ಸೇರಿಸಿಕೊಂಡು ನಿಷ್ಠಾವಂತ ಕಾರ್ಯಕರ್ತರನ್ನು ಮೂಲೆಗೊತ್ತಿ ಭಾಜಪಾ ಸತ್ವಹೀನವಾಗಿದೆ’ ಎಂದು ಸುಬ್ರಹ್ಮಣ್ಯ ಕೆಎಲ್ ಬರೆದಿದ್ದಾರೆ. ‘ಅಕ್ಬರುದ್ದೀನ್ ಓವೈಸಿ ಬಿಜೆಪಿ ಸೇರಿದರೆ ಸ್ವಾಗತ ಆಶ್ಚರ್ಯಪಡಬೇಡಿ, ಮುಂದೊಂದು ದಿನ ಸೇರಲೂಬಹುದು’ ಎಂದು ಸುನಿಲ್ ಬಜಿಲ್ಕೇರಿ ಪೋಸ್ಟ್ ಮಾಡಿದ್ದಾರೆ.