<p><strong>ಬೆಳ್ತಂಗಡಿ</strong>: ‘ಕಳೆಂಜ ಗ್ರಾಮದ ನಂದಗೋಕುಲ ಗೋಶಾಲೆಯಲ್ಲಿ ಪುಣ್ಯಕೋಟಿಗೆ ಒಂದು ಕೋಟಿ... ಗೋಮಾತೆಗೆ ಕೋಟಿ ನಮನ ಎಂಬ ಕಾರ್ಯಕ್ರಮವು ಮೇ 26 ರಂದು ನಡೆಯಲಿದೆ’ ಎಂದು ಸ್ವಾಮಿ ಶ್ರೀವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಹೇಳಿದರು.</p>.<p>ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಂದಗೋಕುಲ ಗೋಶಾಲೆಯು ಸಮಾಜದ ಗೋಶಾಲೆಯಾಗಿದ್ದು, ಅನಾಥ ಮತ್ತು ಅಶಕ್ತ ಸೇರಿದಂತೆ ಸುಮಾರು 250 ಗೋವುಗಳಿವೆ. ಅವುಗಳ ರಕ್ಷಣೆ ಮತ್ತು ಅವುಗಳ ಬದುಕಿಗೆ ಸಂಪನ್ಮೂಲ ಸಂಗ್ರಹದ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಇಲ್ಲಿನ ಗೋವುಗಳ ಆರೈಕೆಗೆ ಕೂಲಿ ವೇತನ, ಮೇವು ಸೇರಿ ತಿಂಗಳಿಗೆ ₹ 2 ಲಕ್ಷ ವೆಚ್ಚವಾಗುತ್ತಿದೆ’ ಎಂದರು.</p>.<p>‘ಸಂಪನ್ಮೂಲ ಸಂಗ್ರಹಕ್ಕಾಗಿ ತಾಲ್ಲೂಕಿನ ಹಿರಿಯ ಉದ್ಯಮಿ, ದಾನಿ ಶಶಿಧರ್ ಶೆಟ್ಟಿ ಬರೋಡ ಅವರ ಗೌರವಾಧ್ಯಕ್ಷತೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗೋಗ್ರಾಸ ಸಹಿತ ಯಾವುದೇ ರೂಪದಲ್ಲಿ ದೇಣಿಗೆ ನೀಡಬಹುದು’ ಎಂದರು.</p>.<p>ನಾಳೆ ಹೊರೆಕಾಣಿಕೆ ಮೆರವಣಿಗೆ: ದೀಪೋತ್ಸವ ಸಂಚಾಲನಾ ಸಮಿತಿ ಪ್ರಧಾನ ಸಂಚಾಲಕ ಶಶಿರಾಜ್ ಶಟ್ಟಿ ಗುರುವಾಯನಕೆರೆ ಮಾತನಾಡಿ, ಬೆಳ್ತಂಗಡಿ ತಾಲ್ಲೂಕಿನ ಎಲ್ಲ ಗ್ರಾಮಗಳಿಂದಲೂ ಗೋಗ್ರಾಸ, ಒಣಹುಲ್ಲು, ಪಶು ಆಹಾರ, ಅಕ್ಕಿ, ಕೃಷಿ ಉತ್ಪನ್ನ, ಅಡಿಕೆ, ತೆಂಗಿನಕಾಯಿ, ಅಕ್ಕಿಯ ಹೊರೆಕಾಣಿಕೆ ಅರ್ಪಣೆ ಕಾರ್ಯಕ್ರಮ ನಡೆಯಲಿದೆ. ಮೇ 19ರಂದು ಮಧ್ಯಾಹ್ನ 2 ಗಂಟೆಗೆ ಬೆಳ್ತಂಗಡಿ ಎಪಿಎಂಸಿ ವಠಾರದಿಂದ ಕಳೆಂಜ ಗೋಶಾಲೆಗೆ ಹೊರೆಕಾಣಿಕೆಯ ಮೆರವಣಿಗೆ ನಡೆಯಲಿದೆ’ ಎಂದು ಹೇಳಿದರು.</p>.<p>ಮೇ 26ರಂದು ಸಂಜೆ 4 ಗಂಟೆಗೆ ಕಳೆಂಜ ಕಾಯರ್ತಡ್ಕ ನಂದಗೋಕುಲ ಗೋಶಾಲೆಯ ಕಾಮಧೇನು ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. 6.30ಕ್ಕೆ ಸಾಮೂಹಿಕ ಗೋಪೂಜೆ, ಸಾವಿರಾರು ಹಣತೆಗಳ ಗೋನಂದಾರತಿ ಮತ್ತು ದೀಪೋತ್ಸವ ನಡೆಯಲಿದೆ ಎಂದು ಅವರು ಹೇಳಿದರು.</p>.<p>ನಂದಗೋಕುಲ ದೀಪೋತ್ಸವ ಸಂಚಾಲನ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳ್ತಂಗಡಿ</strong>: ‘ಕಳೆಂಜ ಗ್ರಾಮದ ನಂದಗೋಕುಲ ಗೋಶಾಲೆಯಲ್ಲಿ ಪುಣ್ಯಕೋಟಿಗೆ ಒಂದು ಕೋಟಿ... ಗೋಮಾತೆಗೆ ಕೋಟಿ ನಮನ ಎಂಬ ಕಾರ್ಯಕ್ರಮವು ಮೇ 26 ರಂದು ನಡೆಯಲಿದೆ’ ಎಂದು ಸ್ವಾಮಿ ಶ್ರೀವಿವೇಕಾನಂದ ಸೇವಾಶ್ರಮ ಟ್ರಸ್ಟ್ ಕಾರ್ಯದರ್ಶಿ ಸುಬ್ರಹ್ಮಣ್ಯ ಕುಮಾರ್ ಅಗರ್ತ ಹೇಳಿದರು.</p>.<p>ಬೆಳ್ತಂಗಡಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಂದಗೋಕುಲ ಗೋಶಾಲೆಯು ಸಮಾಜದ ಗೋಶಾಲೆಯಾಗಿದ್ದು, ಅನಾಥ ಮತ್ತು ಅಶಕ್ತ ಸೇರಿದಂತೆ ಸುಮಾರು 250 ಗೋವುಗಳಿವೆ. ಅವುಗಳ ರಕ್ಷಣೆ ಮತ್ತು ಅವುಗಳ ಬದುಕಿಗೆ ಸಂಪನ್ಮೂಲ ಸಂಗ್ರಹದ ಉದ್ದೇಶದಿಂದ ಈ ಕಾರ್ಯಕ್ರಮ ಆಯೋಜಿಸಿದ್ದೇವೆ. ಇಲ್ಲಿನ ಗೋವುಗಳ ಆರೈಕೆಗೆ ಕೂಲಿ ವೇತನ, ಮೇವು ಸೇರಿ ತಿಂಗಳಿಗೆ ₹ 2 ಲಕ್ಷ ವೆಚ್ಚವಾಗುತ್ತಿದೆ’ ಎಂದರು.</p>.<p>‘ಸಂಪನ್ಮೂಲ ಸಂಗ್ರಹಕ್ಕಾಗಿ ತಾಲ್ಲೂಕಿನ ಹಿರಿಯ ಉದ್ಯಮಿ, ದಾನಿ ಶಶಿಧರ್ ಶೆಟ್ಟಿ ಬರೋಡ ಅವರ ಗೌರವಾಧ್ಯಕ್ಷತೆಯಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಗೋಗ್ರಾಸ ಸಹಿತ ಯಾವುದೇ ರೂಪದಲ್ಲಿ ದೇಣಿಗೆ ನೀಡಬಹುದು’ ಎಂದರು.</p>.<p>ನಾಳೆ ಹೊರೆಕಾಣಿಕೆ ಮೆರವಣಿಗೆ: ದೀಪೋತ್ಸವ ಸಂಚಾಲನಾ ಸಮಿತಿ ಪ್ರಧಾನ ಸಂಚಾಲಕ ಶಶಿರಾಜ್ ಶಟ್ಟಿ ಗುರುವಾಯನಕೆರೆ ಮಾತನಾಡಿ, ಬೆಳ್ತಂಗಡಿ ತಾಲ್ಲೂಕಿನ ಎಲ್ಲ ಗ್ರಾಮಗಳಿಂದಲೂ ಗೋಗ್ರಾಸ, ಒಣಹುಲ್ಲು, ಪಶು ಆಹಾರ, ಅಕ್ಕಿ, ಕೃಷಿ ಉತ್ಪನ್ನ, ಅಡಿಕೆ, ತೆಂಗಿನಕಾಯಿ, ಅಕ್ಕಿಯ ಹೊರೆಕಾಣಿಕೆ ಅರ್ಪಣೆ ಕಾರ್ಯಕ್ರಮ ನಡೆಯಲಿದೆ. ಮೇ 19ರಂದು ಮಧ್ಯಾಹ್ನ 2 ಗಂಟೆಗೆ ಬೆಳ್ತಂಗಡಿ ಎಪಿಎಂಸಿ ವಠಾರದಿಂದ ಕಳೆಂಜ ಗೋಶಾಲೆಗೆ ಹೊರೆಕಾಣಿಕೆಯ ಮೆರವಣಿಗೆ ನಡೆಯಲಿದೆ’ ಎಂದು ಹೇಳಿದರು.</p>.<p>ಮೇ 26ರಂದು ಸಂಜೆ 4 ಗಂಟೆಗೆ ಕಳೆಂಜ ಕಾಯರ್ತಡ್ಕ ನಂದಗೋಕುಲ ಗೋಶಾಲೆಯ ಕಾಮಧೇನು ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಲಿದೆ. 6.30ಕ್ಕೆ ಸಾಮೂಹಿಕ ಗೋಪೂಜೆ, ಸಾವಿರಾರು ಹಣತೆಗಳ ಗೋನಂದಾರತಿ ಮತ್ತು ದೀಪೋತ್ಸವ ನಡೆಯಲಿದೆ ಎಂದು ಅವರು ಹೇಳಿದರು.</p>.<p>ನಂದಗೋಕುಲ ದೀಪೋತ್ಸವ ಸಂಚಾಲನ ಸಮಿತಿ ಅಧ್ಯಕ್ಷ ನಾರಾಯಣ ಗೌಡ ಭಾಗವಹಿಸಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>