ಎನ್ಐಟಿಕೆ ಹಳೆ ವಿದ್ಯಾರ್ಥಿಯಾಗಿರುವ ಸಂಸ್ಥೆಯ ನಿರ್ದೇಶಕ ಪ್ರೊ. ಉದಯಕುಮಾರ್ ಆರ್. ಯರಗಟ್ಟಿ ತಮ್ಮ ಅನುಭವ ಹಂಚಿಕೊಂಡರು. ‘1960ರಲ್ಲಿ ಬಂಜರು ಭೂಮಿಯನ್ನು ಶೈಕ್ಷಣಿಕ ಉದ್ಯಾನವನ್ನಾಗಿ ಪರಿವರ್ತಿಸಿ, ವಿಶ್ವದೆಲ್ಲೆಡೆಯ ವಿದ್ಯಾರ್ಥಿಗಳಿಗೆ ಇಲ್ಲಿ ಎಂಜಿನಿಯರಿಂಗ್ ಶಿಕ್ಷಣ ನೀಡಲಾಗುತ್ತಿದೆ, ಈ ಇ-ಗಾರ್ಡನ್ ನಿರ್ಮಿಸುವಲ್ಲಿ ಪ್ರಧಾನಿ ಜವಾಹರಲಾಲ್ ನೆಹರು ಅವರ ಆತ್ಮೀಯರಾದ ಉಳ್ಳಾಲ ಶ್ರೀನಿವಾಸ್ ಮಲ್ಯ, ಟ್ರಿಪೋಸ್ ರಾಂಗ್ಲರ್, ಡಾ ಡಿ.ಸಿ ಪಾವಟೆ ಡಾ. ಎ.ಎಸ್.ಅಡ್ಕೆ ಅವರು ಶ್ರಮವಹಿಸಿ ಮಾಡಿದ ಕೆಲಸ ಈಗ ಇದು ಎನ್ಐಟಿಕೆ ಆಗಿ ರೂಪುಗೊಂಡಿದೆ’ ಎಂದರು.