ಕೊಣಾಜೆ: ಹಡಿಲು ಬಿದ್ದಿದ್ದ ಗದ್ದೆಯನ್ನು ಹದಗೊಳಿಸಿ ಕೃಷಿ ಕಾರ್ಯ ನಡೆಸಬೇಕೆಂಬ ಉದ್ದೇಶದೊಂದಿಗೆ ಐದು ವರ್ಷಗಳಿಂದ ಕೊಣಾಜೆ ಗುಡ್ಡುಪಾಲ್ನ ಶ್ರೀರಾಮಾಂಜನೇಯ ವ್ಯಾಯಾಮ ಶಾಲೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಕೃಷಿ ಕಾರ್ಯವನ್ನು ನಡೆಸಿಕೊಂಡು ಬರುತ್ತಿದ್ದಾರೆ.
ಈ ಬಾರಿಯೂ ಈ ಗದ್ದೆಯಲ್ಲಿ ನಾಟಿ ಕಾರ್ಯ ಸಮಿತಿ ಸದಸ್ಯರು, ರಾಮಾಂಜನೇಯ ಉಚಿತ ಟ್ಯೂಷನ್ ವಿದ್ಯಾರ್ಥಿಗಳ ಸಹಕಾರದೊಂದಿಗೆ ನಡೆಯಿತು.
ಕೊಣಾಜೆ ಗುಡ್ಡುಪಾಲ್ನ ಶ್ರೀರಾಮಾಂಜನೇಯ ವ್ಯಾಯಾಮ ಶಾಲೆ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಮಿತಿ ಸದಸ್ಯರು ನೇಜಿ ನಾಟಿ ಮಾಡಿದರು