ಕ್ಷಮೆ ಯಾಚನೆ: ‘ನಾನು ಅಕ್ಟೋಬರ್ ಪ್ರಥಮ ವಾರದಲ್ಲಿ ತೊಡಿಕಾನಕ್ಕೆ ಹೋಗಿ ಜಲಪಾತದ ಸ್ಥಳದಲ್ಲಿ ಫೋಟೊ ಶೂಟ್ ನಡೆಸಿದ್ದೆ. ಅದು ಧಾರ್ಮಿಕ ಸ್ಥಳ ಎಂದು ನನಗೆ ಹಾಗೂ ಫೋಟೊಗ್ರಾಫರ್ಗೆ ಗೊತ್ತಿರಲಿಲ್ಲ. ಸ್ಥಳೀಯರೂ ಹೇಳಿರಲಿಲ್ಲ. ಯಾರೂ ನನಗೆ ತೊಂದರೆಯೂ ಮಾಡಿಲ್ಲ. ಹೀಗಾಗಿ, ಈ ತನಕ ಏನೂ ಸಮಸ್ಯೆ ಆಗಿರಲಿಲ್ಲ. ಸುಳ್ಯದ ಸ್ಥಳೀಯ ಪತ್ರಿಕೆಯು ವಿಷಯ ಹಾಕಿದ ಬಳಿಕ, ಆಕ್ಷೇಪ ಬಂತು ಎಂದು ತಿಳಿದು ಬಂತು. ತಕ್ಷಣವೇ, ಎಲ್ಲ ಫೋಟೊಗಳನ್ನು ನನ್ನ ಸಾಮಾಜಿಕ ಜಾಲತಾಣಗಳಿಂದ ಡಿಲೀಟ್ ಮಾಡಿದ್ದೇನೆ. ಕ್ಷಮಿಸಿ ಎಂದು ಕೇಳಿಕೊಳ್ಳುತ್ತಿದ್ದೇನೆ’ ಎಂದು ಬೆಂಗಳೂರಿನ ನಟಿ ಬೃಂದಾ ಅರಸ್ ಹೇಳಿಕೆ ನೀಡಿದ್ದಾರೆ.