ದರ್ಗಾ ಅಧ್ಯಕ್ಷ ಅಬ್ದುಲ್ ರಶೀದ್ ಮಾತನಾಡಿ, ’ಪ್ರಾಮಾಣಿಕ ಕರ್ತವ್ಯದಿಂದ ದೇಶದಲ್ಲೇ ಕೀರ್ತಿ ಪಡೆದು, ಕಾಂಗ್ರೆಸ್ನ ಮುಂಚೂಣಿ ನಾಯಕರಾಗಿರುವ ಪೂಜಾರಿ ಅವರಿಗೆ ಹಿಂದಿನ ಅಧ್ಯಕ್ಷರಾಗಿದ್ದ ದಿ.ಹಾಜಿ ಇಬ್ರಾಹಿಂ ಅವರು ಕುಡ್ಲದ ಮುತ್ತು ಪ್ರಶಸ್ತಿ ನೀಡಿದ್ದರು. ದರ್ಗಾ ಉರುಸ್ ಸಂದರ್ಭದಲ್ಲಿ ಆಹಾರ ಸಾಮಗ್ರಿಗಳನ್ನು ನೀಡುವ ಮೂಲಕ ಸಲ್ಲಿಸಿದ ಸೇವೆ ಉಳ್ಳಾಲದ ಜನತೆ ಮರೆಯಲಾರರು’ ಎಂದರು.
ದರ್ಗಾ ಉಪಾಧ್ಯಕ್ಷ ಯು.ಕೆ. ಮೋನು ಇಸ್ಮಾಯಿಲ್, ಬಾವ ಮೊಹಮ್ಮದ್, ಜತೆ ಕಾರ್ಯದರ್ಶಿ ನೌಷಾದ್ ಅಲಿ, ಲೆಕ್ಕ ಪರಿಶೋಧಕ ಯು.ಟಿ.ಇಲ್ಯಾಸ್,ಜಿಲ್ಲಾ ಕಾಂಗ್ರೆಸ್ ವಕ್ತಾರ ಫಾರೂಕ್ ಉಳ್ಳಾಲ್, ಮುಖಂಡ ಈಶ್ವರ್ ಉಳ್ಳಾಲ್, ದೇವಕಿ ಪೂಜಾರಿ, ಯು.ಕೆ.ಅಹ್ಮದ್ ಬಾವ ಕೊಟ್ಟಾರ, ಹುಸೈನ್ ಕುಂಞಮೋನು, ಸೋಲಾರ್ ಹನೀಫ್, ಎ.ಕೆ.ಮೊಯಿದ್ದೀನ್, ಹಮೀದ್ ಕೋಡಿ ಉಪಸ್ಥಿತರಿದ್ದರು.