ಭಾನುವಾರ ನಡೆದ ವಿಶ್ವಕರ್ಮ ಯುವ ಸಮಾಜ ಮತ್ತು ವಿಶ್ವಬ್ರಾಹ್ಮಣ ಸೇವಾ ಸಂಘದ ಮಹಾಸಭೆಯಲ್ಲಿ ಅವರನ್ನು ಗೌರವಿಸಲಾಯಿತು. ಅವರ ಮುಂದಿನ ವಿದ್ಯಾಭ್ಯಾಸಕ್ಕಾಗಿ ಪುತ್ತೂರು ವಿಶ್ವಕರ್ಮ ಸಮಾಜದ ಶಿಕ್ಷಕರು ಮತ್ತು ಸಮಾಜದವರು ₹ 20 ಸಾವಿರ ಸಂಗ್ರಹಿಸಿ ಹಸ್ತಾಂತರಿಸಿದರು. ಎಸ್ಸೆಸ್ಸೆಲ್ಸಿಯಲ್ಲಿ ಉತ್ತಮ ಅಂಕ ಗಳಿಸಿದ ಪ್ರಣವ್ ಎ ಹಾಗೂ ಕ್ರೀಡಾಪಟು ಪ್ರತಿಜ್ಞಾ ಬಿ ಅವರನ್ನೂ ಅಭಿನಂದಿಸಲಾಯಿತು.