ನಿರ್ಮಾಪಕ ವಿ.ರವಿಕುಮಾರ್, ‘ದೇವದಾಸ್ ಕಾಪಿಕಾಡ್ ಅವರು ಕನ್ನಡದಲ್ಲಿ ಕತೆ, ಚಿತ್ರಕತೆ, ಸಾಹಿತ್ಯ, ಸಂಭಾಷಣೆ ಬರೆದು ನಿರ್ದೇಶಿಸಿದ ಮೊದಲ ಸಿನಿಮಾ ಇದು. ಅವರೂ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಅರ್ಜುನ್ ಕಾಪಿಕಾಡ್ ಸಹ ನಿರ್ದೇಶಕರಾಗಿ ನೆರವಾಗಿದ್ದಾರೆ. ಅರ್ಜುನ್ ಕಜೆ, ಪ್ರಶಾಂತ್ ಕಲ್ಲಡ್ಕ, ವಿಕ್ರಮ್ ದೇವಾಡಿಗ, ಅನೂಪ್ ಸಾಗರ್ ಸಹಾಯಕ ನಿರ್ದೇಶಕ ಹಾಗೂ ಅಬೂಬಕರ್ ಪುತ್ತಕ ಸಹ ನಿರ್ಮಾಪಕರಾಗಿದ್ದಾರೆ. ವಿಷ್ಣು ಅವರ ಛಾಯಾಗ್ರಹಣವಿದ್ದು, ಪುಟ್ಟ ನೆರವಾಗಿದ್ದಾರೆ. ನಕುಲ್ ಅಭಯಂಕರ್ ಅವರು ಸಂಗೀತ ನೀಡಿದ್ದು, ಶರತ್ ಪೂಜಾರಿ ವಸ್ತ್ರವಿನ್ಯಾಸಗೊಳಿಸಿದ್ದಾರೆ. ಸಂದೀಪ್ ಶೆಟ್ಟಿ ಲೈನ್ ಪ್ರೊಡ್ಯುಸರ್, ಪ್ರೊಡಕ್ಷನ್ ತಂಡದಲ್ಲಿ ಸಂತೋಷ್, ರಮಾನಂದ, ಮುನ್ನ, ರಾಜೇಶ್ ಸಹಕರಿಸಿದ್ದಾರೆ’ ಎಂದರು.