ಮಂಜೇಶ್ವರ ತಾಲ್ಲೂಕು ವ್ಯಾಪ್ತಿಯಲ್ಲಿ ಒಂದು ಹೆಂಚಿನ ಮನೆಗೆ ಹಾನಿಯಾಗಿದ್ದು, ಬಾವಿ ಕುಸಿದಿದೆ. ಮೊಗ್ರಾಲ್ ನದಿ, ಕಾರ್ಯಂಗೋಡು ನದಿ, ಮಧುವಾಹಿನಿ ನದಿ, ನೀಲೇಶ್ವರ ನದಿ, ಭೀಮನಡಿ ನದಿ, ಚಾಯೋಂ ನದಿಗಳಲ್ಲಿ ನೀರಿನ ಮಟ್ಟ ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದೆ. ಸ್ಥಳೀಯ ನಿವಾಸಿಗಳು ಎಚ್ಚರ ವಹಿಸುವಂತೆ ಸೂಚನೆ ನೀಡಲಾಗಿದೆ.