ಮಂಗಳೂರು: ಗುರುವಾರ ಸ್ವಲ್ಪವಿರಾಮ ಪಡೆದಿದ್ದ ಮಳೆ, ಶುಕ್ರವಾರ ಮತ್ತೆ ಬಿರುಸುಗೊಂಡಿದ್ದು, ಬೆಳಿಗ್ಗೆಯಿಂದಲೇ ಧಾರಾಕಾರವಾಗಿ ಸುರಿಯುತ್ತಿದೆ. ಮಳೆ ಕಾರಣ ಶ್ರೀಲಂಕಾ ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರು ರಸ್ತೆ ಮೂಲಕ ಕೊಲ್ಲೂರಿಗೆ ತೆರಳಿದ್ದಾರೆ.
ನಗರದ ಹಲವೆಡೆ ನೀರು ತುಂಬಿಕೊಂಡಿದ್ದು, ಜನರು ಓಡಾಡಲು ತೊಂದರೆ ಅನುಭವಿಸುವಂತಾಗಿದೆ. ನಗರದ ಸೆಂಟ್ರಲ್ ರೈಲು ನಿಲ್ದಾಣದ ಆವರಣದಲ್ಲಿ ನೀರು ತುಂಬಿಕೊಂಡಿದ್ದು,ಪ್ರಯಾಣಿಕರು ಸಂಕಷ್ಟ ಎದುರಿಸುವಂತಾಗಿದೆ. ಪಾರ್ಕಿಂಗ್ ಸ್ಥಳವು ಸಂಪೂರ್ಣ ಜಲಾವೃತಗೊಂಡಿದೆ.
ಅವರು ಇಲ್ಲಿಂದ ಹೆಲಿಕಾಪ್ಟರ್ ಮೂಲಕ ಕೊಲ್ಲೂರಿಗೆ ತೆರಳಬೇಕಾಗಿತ್ತು. ಆದರೆ, ತೀವ್ರ ಮಳೆಯ ಕಾರಣ, ಅವರು ರಸ್ತೆ ಮೂಲಕ ಇದೀಗ ಕೊಲ್ಲೂರಿಗೆ ತೆರಳಿದ್ದಾರೆ.ರಸ್ತೆಯುದ್ದಕ್ಕೂ ತೀವ್ರ ಭದ್ರತೆ ಏರ್ಪಡಿಸಲಾಗಿದೆ.