ನಾಲ್ಕೂರು ಗ್ರಾಮದ ಛತ್ರಪ್ಪಾಡಿ ಮನೆಯ ದಿವಾಕರ ಆಚಾರಿ, ಸುಬ್ರಹ್ಮಣ್ಯ ನೂಚಿಲ ಮನೆಯ ಕಾರ್ತಿಕ್, ಬಿಳಿನೆಲೆ ಗ್ರಾಮದ ಚಿದ್ಗಲ್ ಮನೆಯ ಅಶೋಕ್ ಎ., ಹಾಸನ ಜಿಲ್ಲೆಯ ಹೊಸಕೊಪ್ಪಲು ಹನುಮಂತಪುರ ಗ್ರಾಮದ ಚಂದನ್ ಬಂಧಿತರು. ಆರೋಪಿ ದಿವಾಕರ್ ಬಂದೂಕು ತಯಾರಿಸುತ್ತಿರುವುದರ ಬಗ್ಗೆ ಮಾಹಿತಿ ಪಡೆದ ಸುಳ್ಯ ಸರ್ಕಲ್ ಇನ್ಸ್ಪೆಕ್ಟರ್ ನವೀನ್ಚಂದ್ರ ಜೋಗಿ, ಪಿಎಸ್ಐ ಓಮನಾ ಹಾಗೂ ಸಿಬ್ಬಂದಿ ಸೋಮವಾರ ಮನೆಯ ಮೇಲೆ ದಾಳಿ ಮಾಡಿದ್ದಾರೆ. ದಾಳಿಯ ಸಂದರ್ಭದಲ್ಲಿ ಒಂದು ಬಂದೂಕು ಹಾಗೂ ಒಂದು ಸಜೀವ ತೋಟೆಯನ್ನು ವಶಕ್ಕೆ ಪಡೆಯಲಾಗಿದೆ.