‘ರಾತ್ರಿ 7ರಿಂದ ನಡೆಯುವ ಚಿಂತನ ಕಾರ್ಯಕ್ರಮದಲ್ಲಿ ಸುಬ್ರಹ್ಮಣ್ಯ ಸಂಪುಟ ನರಸಿಂಹ ಸ್ವಾಮಿ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಗಳು ಆಶೀರ್ವಚನ ನೀಡುವರು. ಕುಮಟದ ಯಾಜಿ ಮಿತ್ರ ಮಂಡಳಿಯಿಂದ ರಾಜಾ ರುದ್ರಕೋಪ ಬಡಗುತಿಟ್ಟಿನ ಯಕ್ಷಗಾನ ಪ್ರದರ್ಶನಗೊಳ್ಳಲಿದೆ. ವಿದ್ವಾನ್ ರಾಮಕೃಷ್ಣ ಹೆಗಡೆ ಹಿಲ್ಲೂರು, ಕೊಳಗಿ ಕೇಶವ ಹೆಗಡೆ(ಭಾಗವತಿಕೆ), ಪರಮೇಶ್ವರ ಭಂಡಾರಿ(ಚೆಂಡೆ), ರಾಮ ಭಂಡಾರಿ(ಮದ್ದಳೆ) ಹಿಮ್ಮೇಳ ಸಹಕಾರ ನೀಡಲಿದ್ದಾರೆ. ಬಳ್ಕೂರು ಕೃಷ್ಣ ಯಾಜಿ(ರಕ್ತಚಂದನ), ಕಾರ್ತಿಕ್ ಚಿಟ್ಟಾಣಿ(ರುದ್ರಸೇನ), ನೀಲ್ಗೋಡ್ ಶಂಕರ ಹೆಗಡೆ(ಚಿತ್ರಾಕ್ಷಿ), ಶ್ರೀಧರ ಕಾಸರಗೋಡು(ಹಾಸ್ಯ), ಪುರಂದರ ಮೂಡ್ಕಣಿ(ರಕ್ತಕೇಳಿ), ಷಣ್ಮುಖ ಗೌಡ(ಸತ್ಯಶೀಲೆ), ಅಭಿಷೇಕ ಅಡಿ(ಜಯಸೇನ) ಹಿಮ್ಮೇಳದಲ್ಲಿ ಪಾತ್ರಧಾರಿಗಳಾಗಿದ್ದಾರೆ’ ಎಂದು ತಿಳಿಸಿದ್ದಾರೆ.