ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಮಂಗಳೂರು ನಗರ ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್, ಸಿದ್ದಾರ್ಥ್ಸಕಲೇಶಪುರಕ್ಕೆ ತೆರಳುತ್ತಿರುವುದಾಗಿ ಮನೆಯಲ್ಲಿ ಹೇಳಿ ಬಂದಿದ್ದರು. ಮಂಗಳೂರಿಗೆ ಬಂದಿರುವ ಅವರು, ನೇತ್ರಾವತಿ ನದಿ ಸೇತುವೆಯ ಬಳಿ ಕಾಣೆಯಾಗಿದ್ದಾರೆ. ಅವರ ಶೋಧಕ್ಕಾಗಿ ಶ್ವಾನದಳ ನೆರವು ಪಡೆಯಲಾಯಿತು. ಸೇತುವೆಯ ಮಧ್ಯಭಾಗದಲ್ಲಿ ಶ್ವಾನದಳ ಬಂದು ನಿಂತಿತು. ದೋಣಿ ಮತ್ತು ಸ್ಥಳೀಯ ಈಜುಗಾರರ ನೆರವನ್ನೂ ಪಡೆಯಲಾಗಿದೆ.ಸಿದ್ದಾರ್ಥ್ಕಡೆಯದಾಗಿ ಯಾರೊಂದಿಗೆ ಮಾತನಾಡಿದರು, ಯಾರನ್ನು ಸಂಪರ್ಕಿಸಿದ್ದರು ಎಂಬುದರ ಮಾಹಿತಿ ಕಲೆ ಹಾಕುತ್ತಿದ್ದೇವೆ.