ಅಜಿತ್ ಪೇರಾಲು, ಮುರಳಿ ಮಾವಂಜಿ, ಪದ್ಮನಾಭ ಹರ್ಲಡ್ಕ, ಸುನಿಲ್ ಕುಮಾರ್, ರಿಫಾಯಿ ಪೈಚಾರ್, ಗುರುದೀಕ್ಷಿತ್ ನಾವೂರು, ಜಯರಾಮ ಭಟ್ ಅರಂಬೂರು, ಜಯಂತ ಗೌಡ ಅಡ್ಕಾರು, ವಿನಯ ಅರಂತೋಡು ಭಾಗವಹಿಸಿದ್ದಾರೆ.
ಪಯಸ್ವಿನಿ ನದಿಯಲ್ಲಿ ಮರಳು ಬ್ಲಾಕ್ಗಳನ್ನು ಗುರುತಿಸಿ ಕಾನೂನು ಪ್ರಕಾರ ಟೆಂಡರ್ ಪ್ರಕ್ರಿಯೆ ನಡೆಸಬೇಕು ಅಥವಾ ಸಾಂಪ್ರದಾಯಿಕ ರೀತಿಯಲ್ಲಿ ಗ್ರಾಮ ಪಂಚಾಯಿತಿಗೆ ವಹಿಸಿ ಕೊಟ್ಟು ಅವರು ಮರಳು ತೆಗೆಯಲು ಪರವಾನಗಿ ನೀಡುವ ವ್ಯವಸ್ಥೆ ಆಗಬೇಕು ಮತ್ತು ಅವ್ಯಾಹತವಾಗಿ ನಡೆಯುವ ಅನಧಿಕೃತ ಮರಳುಗಾರಿಕೆ ನಿಲ್ಲಿಸಬೇಕು ಎಂದು ಅನಿಲ್ ಕುಮಾರ್ ನೇತೃತ್ವದಲ್ಲಿ ಸಚಿವರಿಗೆ ಮನವಿ ಸಲ್ಲಿಸಿದ್ದರು.