‘ಕೆಲಸ ಮಾಡಿಕೊಡಬೇಕಾದರೆ ತನಗೆ ಹಾಗೂ ತಹಸೀಲ್ದಾರ್ಗೆ ಲಂಚ ಕೊಡಬೇಕು’ ಎಂದು ಆರೋಪಿ ಶಿವಾನಂದ ಬೇಡಿಕೆ ಇಟ್ಟಿದ್ದರು. ಅರ್ಜಿದಾರರು ಈ ಬಗ್ಗೆ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಜಾಗ ಮಾರಾಟಕ್ಕೆ ಸಂಬಂಧಿಸಿ ನಿರಾಕ್ಷೇಪಣಾ ಪತ್ರ ನೀಡಲು ₹ 4700 ಲಂಚ ಪಡೆದ ಆರೋಪದ ಮೇರೆಗೆ ಶಿವಾನಂದ ನಾಟ್ಯಾಕರ್ನನ್ನು ಲೋಕಾಯುಕ್ತ ಪೊಲೀಸರು ಸೆ.30ರಂದು ಬಂಧಿಸಿದ್ದರು. ಲಂಚದಲ್ಲಿ ತಹಶೀಲ್ದಾರ್ ಪುರಂದರ ಹೆಗ್ಡೆ ಅವರಿಗೂ ಪಾಲು ಇತ್ತು ಎಂಬುದಕ್ಕೆ ಪ್ರಬಲ ಸಾಕ್ಷ್ಯಗಳಿದ್ದ ಕಾರಣ, ಅವರನ್ನೂ ಬಂಧಿಸಿದ್ದರು.