‘ತುಳು ಸಾಹಿತ್ಯ ಅಕಾಡೆಮಿ ಆಯ್ಕೆಯಲ್ಲಿ ಲೋಪ; ಪುಸ್ತಕ ಬಹುಮಾನ ‘ಗೌರವ’ಕ್ಕೆ ಸೀಮಿತ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ ಪ್ರಕಟಗೊಂಡ ವರದಿಗೆ
ಪ್ರತಿಕ್ರಿಯಿಸಿರುವ ಅವರು, ‘ತುಳುನಾಡಿನ ಪ್ರಾಣಿ ಜಾನಪದ’ ಎಂಬ ನನ್ನ ಸಂಶೋಧನ ಕೃತಿಗೆ ಅಕಾಡೆಮಿ ಪುಸ್ತಕ ಬಹುಮಾನ ಘೋಷಣೆಯಾಗಿತ್ತು. ನಂತರ, ಇದು ಪಿಎಚ್ಡಿ ಸಂಶೋಧನಾ ಕೃತಿ ಎಂಬ ಹಿನ್ನೆಲೆಯಲ್ಲಿ ಗೊಂದಲಗಳು ಸೃಷ್ಟಿಯಾದವು. ವಾಸ್ತವದಲ್ಲಿ ಇದು ಪಿಎಚ್ಡಿ ಸಂಶೋಧನಾ ಕೃತಿಯಾದರೂ 28 ವರ್ಷಗಳ ನಂತರ ಬಹಳಷ್ಟು ಪರಿಷ್ಕರಿಸಿ ಪ್ರಕಟಿಸಲಾಗಿದೆ’ ಎಂದು ತಿಳಿಸಿದ್ದಾರೆ.