1970ರ ದಶಕದಲ್ಲಿ ತುಳು ಸಿನಿಮಾಗಳಿಗೆ ಗೀತೆಗಳನ್ನು ಬರೆದಿದ್ದು, ಪಿ.ಬಿ.ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಜೇಸುದಾಸ್, ಎಸ್.ಜಾನಕಿ ಕಂಠಸಿರಿಯಲ್ಲಿ ಖ್ಯಾತಿ ಪಡೆದಿದ್ದವು. 1973ರಲ್ಲಿ ತೆರೆಕಂಡ ‘ಉಡಲ್ದ ತುಡರ್’ ಚಿತ್ರಕಥೆಗೆ ಪ್ರಶಸ್ತಿ ಪಡೆದಿದ್ದರು. ಕನ್ನಡ–ತುಳು ಸಿನಿಮಾ ಮತ್ತು ನಾಟಕಗಳಿಗೆ 350ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿದ್ದರು. 69 ನಾಟಕ ಹಾಗೂ ಸಿನಿಮಾಗಳಿಗೆ (ಗೀತೆ, ಕಥೆ, ಚಿತ್ರಕತೆ, ಸಂಭಾಷಣೆ) ಸಾಹಿತ್ಯಿಕ ಕೊಡುಗೆ ನೀಡಿದ್ದರು. ‘ಮಣ್ಣ್ ದ ಮಗಲ್ ಅಬ್ಬಕ್ಕ‘ ಮತ್ತು ‘ಧರ್ಮೊಗು ಧರ್ಮದ ಸವಾಲ್’ ಅವರ ಕೃತಿಗಳು.