ಕಾಸರಗೋಡು: ಕಾಞಂಗಾಡ್ ಬಳಿಯ ಇರಿಯದಲ್ಲಿ ಜ್ಯುವೆಲ್ಲರಿ ಮಾಲೀಕ ಬಾಲಚಂದ್ರನ್ ಪ್ರಯಾಣಿಸುತ್ತಿದ್ದ ಬೈಕಿಗೆ ಕಾರು ಡಿಕ್ಕಿಯಾಗಿಸಿ, ಮುಖಕ್ಕೆ ಮೆಣಸಿನ ಪುಡಿ ಎರಚಿದ ತಂಡ ಸಲೀಂ ಮತ್ತು ಸತ್ತಾರ್ನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಮಂಗಳವಾರ ರಾತ್ರಿ ಕಾರಿನಲ್ಲಿ ಬಂದ ಮೂವರು ಕೃತ್ಯ ಎಸಗಿದ್ದರು. ಸದ್ದು ಕೇಳಿ ಜನರು ಸೇರಿದಾಗ ಆರೋಪಿಗಳಿ ಪರಾರಿಯಾಗಿದ್ದರು. ಬಾಲಚಂದ್ರನ್ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.