ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ವೀರೇಂದ್ರ ಹೆಗ್ಗಡೆ ಅವರು, ‘ಉಡುಪಿಯಲ್ಲಿ ಹುಟ್ಟಿ ಬೆಳೆದ ಆಸ್ಕರ್ ಫರ್ನಾಂಡಿಸ್ ಅವರು ನೆಹರೂ ಕುಟುಂಬಕ್ಕೆ ತೀರಾ ಆತ್ಮೀಯರಾಗಿದ್ದರು. ಬಹುಬೇಗನೆ ರಾಜ್ಯ, ರಾಷ್ಟ್ರಕಾರಣದಲ್ಲಿ ಅವರು ಮಿಂಚಿದರು. ಅವರ ಸೇವೆ ಇನ್ನೂ ನಾಡಿನ ಜನತೆಗೆ ಬೇಕಾಗಿದೆ. ಹಾಗಾಗಿ ಅವರು ಶೀಘ್ರ ಗುಣಮುಖರಾಗಿ ಬರಲಿ’ ಎಂದರು.