ವೇಶ್ಯಾ ವೃತ್ತಿಯಲ್ಲಿ ವಯಸ್ಸು, ಮೇಲು–ಕೀಳು, ಜಾತಿ ಇಂತಹ ಯಾವ ಮಾನದಂಡಗಳು ಇರುವುದಿಲ್ಲ. ಯಾವ ಧರ್ಮ ರಕ್ಷಕರೂ ಕೂಡ ಇವರ ರಕ್ಷಣೆಗೆ ಬರುವುದಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು. ಲೇಖಕಿ ಜ್ಯೋತಿ ಚೇಳ್ಯಾರು ಅಧ್ಯಕ್ಷತೆ ವಹಿಸಿದ್ದರು. ಡಾ. ರೇಶ್ಮಾ ಉಳ್ಳಾಲ್ ‘ತೃತೀಯ ಲಿಂಗಿಗಳ ಬದುಕು ಬವಣೆ’ ಕುರಿತು ಉಪನ್ಯಾಸ ನೀಡಿದರು. ಪ್ರಕಾಶಕ ಕಲ್ಲೂರು ನಾಗೇಶ್ ಇದ್ದರು.