ಒಂದೂವರೆ ವರ್ಷ ತಮ್ಮ ಸಂಸ್ಥೆಯಲ್ಲಿ ಆರೈಕೆ ಮಾಡಿದ್ದಾರೆ. ವಾರದ ಹಿಂದೆ ಸುಬ್ರಹ್ಮಣ್ಯ ಮೊಬೈಲ್ ಸಂಖ್ಯೆಯೊಂದನ್ನು ನೆನಪು ಮಾಡಿಕೊಂಡಿದ್ದು, ಸಂಸ್ಥೆಯವರು ಕರೆ ಮಾಡಿದಾಗ ಅವರ ಸಹೋದರ ವೆಂಕಟೇಶ್ ಮಾತನಾಡಿದ್ದಾರೆ. ಆ ಮೂಲಕ ಕುಟುಂಬ ಪತ್ತೆಯಾಗಿದೆ. ಕುಟುಂಬದ ಜೊತೆ ಶನಿವಾರ ಮಂಗಳೂರಿಗೆ ಬಂದ ವೆಂಕಟೇಶ್, ಸಹೋದರ ಸುಬ್ರಹ್ಮಣ್ಯನಿಗೆ ಸಂಬಂಧಿಸಿದ ದಾಖಲೆಗಳನ್ನೆಲ್ಲ ನೀಡಿ, ದೃಢೀಕರಿಸಿ ವಾಪಸ್ ಮನಗೆ ಕರೆದೊಯ್ದಿದ್ದಾರೆ.