ಭಾರತ್ ಆಗ್ರೋವೆಟ್ ಇಂಡಸ್ಟ್ರೀಸ್ನ ವ್ಯವಸ್ಥಾಪಕ ಪಾಲುದಾ ರರಾಗಿರುವ ಅರುಣ್ಕುಮಾರ್ ಅವರ ಮೊಬೈಲ್ ದೂರವಾಣಿಗೆ ಮಾರ್ಚ್ 17ರಿಂದ 23ರವರೆಗಿನ ಅವಧಿಯಲ್ಲಿ ಹಲವು ಬಾರಿ ಇಂಟರ್ನೆಟ್ ಕರೆ ಮಾಡಿರುವ ದುಷ್ಕರ್ಮಿ, ₹ 50 ಲಕ್ಷ ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ತಾನು ಕಲಿ ಯೋಗೀಶ ಎಂದು ಪರಿಚಯಿಸಿಕೊಂಡು ಮಾತನಾಡಿರುವ ಆತ, ಅರುಣ್ಕುಮಾರ್ ಮೊಬೈಲ್ಗೆ ಅವಾಚ್ಯವಾಗಿ ನಿಂದಿಸಿ ಸಂದೇಶವನ್ನೂ ಕಳುಹಿಸಿದ್ದಾನೆ.