ಮಂಗಳೂರು: 1980ರ ದಶಕದಿಂದ ಇತ್ತೀಚಿನವರೆಗೂ ರಾಜಕಾರಣದಲ್ಲಿ ಸಕ್ರಿಯವಾಗಿದ್ದ ಹಿರಿಯ ನೇತಾರ ವಿ.ಧನಂಜಯ ಕುಮಾರ್ ಸಿಕ್ಕ ಎಲ್ಲ ಅವಕಾಶಗಳನ್ನೂ ಕರಾವಳಿಯ ಅಭಿವೃದ್ಧಿಗಾಗಿ ಬಳಸಿಕೊಂಡವರು. ಕೇಂದ್ರೀಯ ತೆರಿಗೆ ಮಂಡಳಿ ಕಚೇರಿ, ಪಾಸ್ಪೋರ್ಟ್ ಸ್ವೀಕೃತಿ ಕೇಂದ್ರ, ನವಮಂಗಳೂರು ಬಂದರಿನಲ್ಲಿ ಹೊಸ ಜೆಟ್ಟಿಗಳ ನಿರ್ಮಾಣ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹೆಜ್ಜೆ ಗುರುತುಗಳನ್ನು ಮೂಡಿಸಿದ್ದರು.