ಉಳ್ಳಾಲ: ಯುವ ಸಮುದಾಯ ಪತ್ರಿಕಾ ರಂಗದಲ್ಲಿ ತಮ್ಮನ್ನು ಹೆಚ್ಚು ತೊಡಗಿಸಿ ಕೊಳ್ಳಬೇಕು ಎಂದು ಪತ್ರಕರ್ತೆ ಹಾಗೂ ನಿರೂಪಕಿ ವಸಂತಿ ಹರಿಪ್ರಕಾಶ್ ಹೇಳಿದರು.
ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯೂ ನಿಕೇಶನ್ ದೇರಳಕಟ್ಟೆ ಇದರ ಪತ್ರಿಕೋ ದ್ಯಮ ಹಾಗೂ ಸಮೂಹ ಸಂವಹನ ವಿಭಾಗದ ವತಿಯಿಂದ ಪನೀರ್ ಕ್ಯಾಂಪ ಸ್ನಲ್ಲಿ ಮಾರ್ಚ್ 11ರವರೆಗೆ ನಡೆಯಲಿ ರುವ ಬೀಕನ್ಸ್ 2ಕೆ17 ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ದಕ್ಷಿಣ ಕನ್ನಡ ಜಿಲ್ಲೆ ವಿವಿಧ ಧರ್ಮ, ನಂಬಿಕೆ, ಭಾಷೆ ಹಾಗೂ ಸಂಸ್ಕೃತಿಯನ್ನು ಒಗ್ಗೂಡಿಸಿಕೊಂಡಿರುವ ಪ್ರದೇಶ. ಮಾಧ್ಯ ಮಗಳಲ್ಲಿ ಕಾರ್ಯನಿರ್ವಹಿಸುವ ವೇಳೆ ಹೆಚ್ಚು ಈ ಕುರಿತು ತಿಳಿದುಕೊಂಡಿದ್ದೇನೆ ಎಂದು ಅವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿಟ್ಟೆ ವಿಶ್ವವಿದ್ಯಾಲಯದ ಉಪಕುಲಪತಿ ವಿಶಾಲ್ ಹೆಗ್ಡೆ ವಹಿಸಿದ್ದರು. ಕಾರ್ಯಕ್ರಮ ಸಂಯೋಜಕಿ ಅನಿಶಾ ನಿಶಾಂತ್, ಪತ್ರಿ ಕೋದ್ಯಮ ವಿಭಾಗದ ಮುಖ್ಯಸ್ಥ ಪ್ರೊ. ರವಿರಾಜ್ ಇದ್ದರು. ಕೆವಿನ್ ನಿರೂಪಿಸಿ ದರು. ರೋಹನ್ ವಂದಿಸಿದರು.