ನಗರದ ಬೊಕ್ಕಪಟ್ಣ ಕಲ್ಲುರ್ಟಿ ದೈವಸ್ಥಾನದ ಬಳಿಯಿಂದ ಹೊರಟ ಜಲಥಾನ್ಗೆ ಜಿಲ್ಲಾಧಿಕಾರಿ ಸಸಿಕಾಂತ್ ಸೆಂಥಿಲ್ ಚಾಲನೆ ನೀಡಿದರು. ಚೆಂಡೆ, ಬಣ್ಣದವೇಷಗಳ ಜೊತೆ ಜಲಥಾನ್ ಸಾಗಿತು. ಸ್ವೀಪ್ ಸಮಿತಿ ಅಧ್ಯಕ್ಷರಾದ ಡಾ.ಎಂ.ಆರ್.ರವಿ, ಮಹಾನಗರ ಪಾಲಿಕೆ ಆಯುಕ್ತ ಮೊಹಮ್ಮದ್ ನಜೀರ್, ಸ್ವೀಪ್ ಸಮಿತಿ ಕಾರ್ಯದರ್ಶಿ ಕೆ. ಸುಧಾಕರ್, ಜಾದೂಗಾರ ಕುದ್ರೋಳಿ ಗಣೇಶ್ , ಮೀನುಗಾರಿಕಾ ಇಲಾಖೆ ಡಿಡಿ ಡಾ.ಸುಷ್ಮಿತಾ ರಾವ್ , ಪ್ರೊ. ವಿನೀತಾ ರೈ ಜಲಥಾನ್ನಲ್ಲಿ ಭಾಗವಹಿಸಿ ಜಾಗೃತಿ ಮೂಡಿಸಿದರು.