ದಾವಣಗೆರೆ: ಇಲ್ಲಿನ ದೇವರಾಜ ಅರಸು ಬಡಾವಣೆಯ ಮಳಿಗೆಯೊಂದರಲ್ಲಿ ಮಾರಾಟಕ್ಕೆ ಇಟ್ಟಿದ್ದ 22 ಪ್ಲಾಸ್ಟರ್ ಆಫ್ ಪ್ಯಾರೀಸ್ ಗಣೇಶ ಮೂರ್ತಿಗಳನ್ನು ಪಾಲಿಕೆ ಆಧಿಕಾರಿಗಳು ಗುರುವಾರ ವಶಪಡಿಸಿಕೊಂಡಿದ್ದಾರೆ.
ಸಾರ್ವಜನಿಕರು ನೀಡಿದ ಮಾಹಿತಿಯ ಮೇರೆಗೆ ಪಾಲಿಕೆ ಪರಿಸರ ಅಧಿಕಾರಿ ಸುರೇಶ್, ಪರಿಸರ ಎಂಜಿನಿಯರ್ ಸುನೀಲ್, ಆರೋಗ್ಯ ನಿರೀಕ್ಷಕರಾದ ಅಂಜನಪ್ಪ, ನಿಖಿಲ್ ಇತರರು ದಾಳಿ ನಡೆಸಿದ್ದಾರೆ. ತೆಲಂಗಾಣದಿಂದ ಮೂರ್ತಿಗಳನ್ನು ತಂದು ಶೇಖರಿಸಲಾಗಿತ್ತು.
5 ಅಡಿಗಳಿಗಿಂತ ಎತ್ತರವಾದ ಗಣಪನ ಮೂರ್ತಿಯನ್ನು ಪ್ರತಿಷ್ಠಾಪಿಸದಂತೆ ಜಿಲ್ಲಾಡಳಿತದ ಸಭೆಯಲ್ಲಿ ಈಚೆಗೆ ಸೂಚನೆ ನೀಡಿತ್ತು. ಅದನ್ನೂ ಮೀರಿ ಇದನ್ನು 5 ಅಡಿಗೂ ಹೆಚ್ಚು ಎತ್ತರ ಇರುವ 6 ಗಣಪನ ಮೂರ್ತಿಗಳನ್ನು ಶೇಖರಿಸಲಾಗಿತ್ತು.