ಹಿರೇಮಳಲಿ ಗ್ರಾಮದ ವಾಸಿ ತಿಪ್ಪೇಶ್(42) ಹಾಗೂ ಮೇಳನಾಯಕನಕಟ್ಟೆ ಗ್ರಾಮದ ಅರುಣ್(35) ಮೃತಪಟ್ಟವರು. ನಲ್ಲೂರಿನಿಂದ ಹಿರೇಮಳಲಿ ಗ್ರಾಮಕ್ಕೆ ಬರುತ್ತಿದ್ದ ತಿಪ್ಪೇಶ್ ಹಾಗೂ ನಲ್ಲೂರು ಗ್ರಾಮದ ಕಡೆ ಬರುತ್ತಿದ್ದ ಅರುಣ್ ಅವರ ಬೈಕ್ಗಳು ನಿಯಂತ್ರಣ ತಪ್ಪಿ ಮುಖಾಮುಖಿ ಡಿಕ್ಕಿಯಾಗಿವೆ. ಡಿಕ್ಕಿಯಾದ ರಭಸಕ್ಕೆ ಇಬ್ಬರು ಸವಾರರು ಸ್ಥಳದಲ್ಲಿಯೇ ಮೃತಪಟ್ಟರು. ಚನ್ನಗಿರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.