ದಾವಣಗೆರೆ: ಇಲ್ಲಿನಎಂ.ಸಿ.ಸಿ ‘ಎ’ ಬ್ಲಾಕ್ನ ಶ್ರೀಕೃಷ್ಣ ಕಲಾ ಮಂದಿರದಲ್ಲಿಉಡುಪಿಯ ಅದಮಾರು ಮಠದ ಈಶಪ್ರಿಯತೀರ್ಥ ಸ್ವಾಮೀಜಿ ಗುರುವಾರ ಆಶೀರ್ವಚನ ನೀಡಿದರು.
ಉಡುಪಿಯಲ್ಲಿ ಜನವರಿ 18ರಂದು ನಡೆಯುವ ಪರ್ಯಾಯ ಪೀಠಾರೋಹಣ ಮಹೋತ್ಸವದ ಪೂರ್ವಭಾವಿ ಸಂಚಾರ ಅಂಗವಾಗಿ ನಗರಕ್ಕೆ ಭೇಟಿ ನೀಡಿದ್ದ ಅವರು ಭಕ್ತರ ಮನೆಗಳಲ್ಲಿ ಪಾದಪೂಜೆಯಲ್ಲಿ ಭಾಗವಹಿಸಿದರು. ಬಳಿಕ ಶ್ರೀಕೃಷ್ಣ ಕಲಾ ಮಂದಿರದಲ್ಲಿ ಸಂಸ್ಥಾನ ಪೂಜೆ ನಡೆಸಿದರು.