‘ನಾನು ಬೆಳೆಗಳಿಗೆ ಸಾವಯವ ಗೊಬ್ಬರವನ್ನೇ ಬಳಸುತ್ತಿದ್ದೇನೆ. ಇದರಿಂದ ಎಲ್ಲಾ ಉತ್ಪನ್ನಗಳು ಉತ್ತಮ ಗುಣಮಟ್ಟದಿಂದ ಕೂಡಿವೆ. ಅಡಿಕೆ, ತೆಂಗು, ಬಾಳೆ, ಹಲಸು ಇವು ಮಾರಾಟಕ್ಕಾದರೆ, ಉಳಿದ ಹಣ್ಣು, ತರಕಾರಿ, ಹೂಗಳನ್ನು ಉಚಿತವಾಗಿ ಎಲ್ಲರಿಗೂ ಹಂಚುತ್ತೇನೆ. ಉಪ್ಪಿನ ಕಾಯಿಗೆ ಬಳಸುವ ಕಂಚಿಕಾಯಿ, ಮಾವಿನಕಾಯಿ, ಮಾವಿನಹಣ್ಣು, ಅಪರೂಪದ ಚಕ್ಕೋತ ಹಣ್ಣುಗಳನ್ನು ಜನ ಕೇಳಿ ತೆಗೆದುಕೊಂಡು ಹೋಗುತ್ತಾರೆ. ಅದರಂತೆ ಮಾವಿನಹಣ್ಣು, ಹಲಸಿನ ಹಣ್ಣುಗಳನ್ನೂ ಕೇಳಿದವರಿಗೆ ಕೊಡುತ್ತೇನೆ. ಇದರಲ್ಲಿ ನನಗೆ ತೃಪ್ತಿ ಇದೆ’ ಎಂದು ಅವರು ತಿಳಿಸುತ್ತಾರೆ.