ಚನ್ನಗಿರಿ, ಭದ್ರಾವತಿ, ಶಿವಮೊಗ್ಗ, ಬಿರೂರು, ಕಡೂರು ಮುಂತಾದ ಕಡೆಗಳಿಗೆ ಇದೇ ರಸ್ತೆಯಲ್ಲಿ ದಿನಕ್ಕೆ ಸಾವಿರಾರು ವಾಹನಗಳು ಸಂಚರಿಸುತ್ತವೆ. ಇಂಥ ದಟ್ಟನೆಯ ರಸ್ತೆ ಕುಸಿಯುತ್ತಿದ್ದರೂ ಸಂಬಂಧಪಟ್ಟವರು ಗಮನ ಹರಿಸದ ಬಗ್ಗೆ ‘ಪ್ರಜಾವಾಣಿ’ಯ ಸೋಮವಾರದ ಆವೃತ್ತಿಯಲ್ಲಿ ‘ಹದಡಿ ಕೆರೆ ಏರಿಯಲ್ಲಿ ಹೆದ್ದಾರಿ ಬಿರುಕು’ ಎಂಬ ಶೀರ್ಷಿಕೆ ಅಡಿವರದಿ ಪ್ರಕಟಿಸಿ ಬೆಳಕು ಚೆಲ್ಲಲಾಗಿತ್ತು. ರಸ್ತೆ ಸಂಪೂರ್ಣ ಕುಸಿದರೆ ಸಂಚಾರವೇ ಕಡಿತಗೊಳ್ಳುವ ಅಪಾಯದ ಬಗ್ಗೆ ತಿಳಿಸಿತ್ತು.