ವಿಶ್ರಾಂತ ಜಂಟಿ ನಿರ್ದೇಶಕ ಎಚ್.ಕೆ. ಲಿಂಗರಾಜ್ ಉಪನ್ಯಾಸ ನೀಡಿದರು. ಯುಪಿಎಸ್ಸಿ ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್ ಪಡೆದ ಸೌಭಾಗ್ಯ ಬೀಳಗಿಮಠ ಪರವಾಗಿ ಅವರ ತಾಯಿ ಶರಣಮ್ಮ ಅವರನ್ನು ಸನ್ಮಾನಿಸಲಾಯಿತು. ಯೋಗ ಗುರು ಜ್ಞಾನಚಂದ್ರ ಅವರನ್ನು ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಶರಣ ಸಾಹಿತ್ಯ ಪರಿಷತ್ತಿನ ಕೆ.ಬಿ. ಪರಮೇಶ್ವರಪ್ಪ, ಭಕ್ತಮಂಡಳಿಯ ವಿಶ್ವನಾಥ, ಕಾರ್ಯದರ್ಶಿ ರವಿಶಂಕರ್, ಕರಿಬಸಪ್ಪ, ಲಿಂಗರಾಜ್ ಕೆ. ಶಶಿಧರ್, ಶಶಿಧರ್ ಬಸಾಪುರ, ಟಿ.ಜಿ. ಲೀಲಾವತಿ ಇದ್ದರು. ಬಸವ ಕಲಾ ಲೋಕದ ಕಲಾವಿದರು ವಚನ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.