ಶಿವಮೊಗ್ಗ ತಾಲ್ಲೂಕು ಆಯನೂರು ಕೋಹಳ್ಳಿ ತಾಂಡಾದ ನವೀನ (25) ಮೃತಪಟ್ಟ ಯುವಕ. ಸೂರಗೊಂಡನಕೊಪ್ಪದಲ್ಲಿ ಸಂತ ಸೇವಾಲಾಲ್ ಜಯಂತಿಯಲ್ಲಿ ಪಾಲ್ಗೊಂಡು ಶನಿವಾರ ತನ್ನ ಬೈಕಲ್ಲಿ ವಾಪಸ್ಸಾಗುತ್ತಿದ್ದಾಗ ಬೈಕ್ ನಿಯಂತ್ರಣ ತಪ್ಪಿ ಕಬ್ಬಿಣದ ತಡೆಗೋಡೆಗೆ ಡಿಕ್ಕಿಯಾಗಿದೆ. ಸ್ಥಳದಲ್ಲೇ ಇದ್ದ ಅಖಿಲೇಶನಾಯ್ಕ, ಮಂಜುನಾಯ್ಕ ತಕ್ಷಣ ಉಪಚರಿಸುವ ವೇಳೆ ಅವರು ಮೃತಪಟ್ಟಿದ್ದಾರೆ. ಯುವಕನ ತಂದೆ ಕುಮಾರನಾಯ್ಕ ನೀಡಿದ ದೂರಿನಂತೆ ನ್ಯಾಮತಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.