ಗುರುವಾರ, 3 ಜುಲೈ 2025
×
ADVERTISEMENT
ADVERTISEMENT

ದಾವಣಗೆರೆ: ಹೆಚ್ಚುತ್ತಿದೆ ‘ಹಸಿರ ಹೊದಿಕೆ’

ಅರಣ್ಯ ಇಲಾಖೆ, ಸಂಘ–ಸಂಸ್ಥೆಗಳ ಕಾಳಜಿ.. ಜಾಗೃತಿ ಕಾರ್ಯಕ್ರಮದ ಫಲ...
Published : 12 ಏಪ್ರಿಲ್ 2025, 7:15 IST
Last Updated : 12 ಏಪ್ರಿಲ್ 2025, 7:15 IST
ಫಾಲೋ ಮಾಡಿ
Comments
ದಾವಣಗೆರೆಯ ಬಾತಿ ಕೆರೆಯ ಬಳಿ ರಸ್ತೆಯ ಬದಿಯಲ್ಲಿ ಕಳೆದ ವರ್ಷದ ಮಳೆಗಾಲದ ಆರಂಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಿಡಗಳನ್ನು ನೆಡುತ್ತಿರುವುದು (ಸಂಗ್ರಹ ಚಿತ್ರ)
ದಾವಣಗೆರೆಯ ಬಾತಿ ಕೆರೆಯ ಬಳಿ ರಸ್ತೆಯ ಬದಿಯಲ್ಲಿ ಕಳೆದ ವರ್ಷದ ಮಳೆಗಾಲದ ಆರಂಭದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಗಿಡಗಳನ್ನು ನೆಡುತ್ತಿರುವುದು (ಸಂಗ್ರಹ ಚಿತ್ರ)
ಕುರುಚಲು ಕಾಡಿನಿಂದ ಆವೃತವಾದ ಮಲೇಬೆನ್ನೂರಿನ ಮನ್ನಾ ಜಂಗಲ್‌ ಪ್ರದೇಶ
ಕುರುಚಲು ಕಾಡಿನಿಂದ ಆವೃತವಾದ ಮಲೇಬೆನ್ನೂರಿನ ಮನ್ನಾ ಜಂಗಲ್‌ ಪ್ರದೇಶ
ಅಂಕಿ–ಅಂಶ 5,924 ಚ.ಕಿ.ಮೀ. ಒಟ್ಟು ಭೌಗೋಳಿಕ ಪ್ರದೇಶ 10.63 ಚ.ಕಿ.ಮೀ. ದಟ್ಟ ಅರಣ್ಯ ಪ್ರದೇಶ 163.52 ಚ.ಕಿ.ಮೀ. ಮಧ್ಯಮ ಗಾತ್ರದ ಅರಣ್ಯ ಪ್ರದೇಶ 533.89 ಚ.ಕಿ.ಮೀ. ಸಾಮಾನ್ಯ ಅರಣ್ಯ ಪ್ರದೇಶ 708.04 ಚ.ಕಿ.ಮೀ. ಒಟ್ಟು ಪ್ರದೇಶ ಶೇ 3.42 2021ರ ಸಮೀಕ್ಷಾ ವರದಿಗೆ ಹೋಲಿಸಿದರೆ ಹೆಚ್ಚಾದ ಅರಣ್ಯ ಪ್ರದೇಶ (ಆಧಾರ 2023ರ ಭಾರತೀಯ ಅರಣ್ಯ ಸಮೀಕ್ಷಾ ವರದಿ)
ಅರಣ್ಯ ಹೆಚ್ಚಳಕ್ಕೆ ಇಲಾಖೆಯ ಯೋಜನೆಗಳು
ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆ: ರಿಯಾಯಿತಿ ದರದಲ್ಲಿ ಸಸಿಗಳನ್ನು ಒದಗಿಸುವುದು ಹಾಗೂ ಪೋಷಿಸಿದ ಪ್ರತಿ ಸಸಿಗೆ ಪ್ರೋತ್ಸಾಹಧನ. ಮಗುವಿಗೊಂದು ಮರ ಶಾಲೆಗೊಂದು ವನ: ಶಾಲಾ ವಿದ್ಯಾರ್ಥಿಗಳ‌ಲ್ಲಿ ಸಾರ್ವಜನಿಕರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವುದು ಮತ್ತು ಉಚಿತ ಸಸಿ ಒದಗಿಸುವುದು. ವೃಕ್ಷೋದ್ಯಾನ: ಅರಣ್ಯ ಅಥವಾ ಅರಣ್ಯೇತರ ಪ್ರದೇಶ ಸರ್ಕಾರಿ ಜಾಗ ಮತ್ತು ಇತರೆ ಸಮುದಾಯಕ್ಕೆ ಸೇರಿದ ಪ್ರದೇಶಗಳಲ್ಲಿ ವೃಕ್ಷೋದ್ಯಾನದ ಅಭಿವೃದ್ಧಿ. ದೈವೀವನ: ಧಾರ್ಮಿಕ ಕ್ಷೇತ್ರಕ್ಕೆ ಸಮೀಪವಾದ ಮತ್ತು ಜನರಿಗೆ ಅನುಕೂಲವಾದ ಪ್ರದೇಶಗಳಲ್ಲಿ ದೈವೀವನ ಅಭಿವೃದ್ಧಿ ಮತ್ತು ಸಂರಕ್ಷಣೆ. ಚಿಣ್ಣರ ವನ ದರ್ಶನ: ಶಾಲಾ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿ ಮೂಡಿಸಲು ಅರಣ್ಯ ಮತ್ತು ವನ್ಯಜೀವಿ ಪ್ರದೇಶಗಳಿಗೆ ಭೇಟಿಗೆ ಅವಕಾಶ.
‘ಅರಣ್ಯ ಪ್ರದೇಶ ಹೆಚ್ಚಳ ಆಶಾದಾಯಕ’
‘ಇತ್ತೀಚಿನ ವರ್ಷಗಳಲ್ಲಿ ಅರಣ್ಯ ಪ್ರದೇಶ ಹೆಚ್ಚಳವಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಅರಣ್ಯ ಇಲಾಖೆಯಿಂದಲೂ ಹಲವು ಕ್ರಮ ಕೈಗೊಳ್ಳಲಾಗುತ್ತಿದೆ. ಜನರಲ್ಲಿ ಅರಣ್ಯ ನಾಶ ತಡೆಯ ಬಗ್ಗೆ ಹೆಚ್ಚು ಜಾಗೃತಿ ಕಾರ್ಯಕ್ರಮಗಳನ್ನು ಮೂಡಿಸಬೇಕು. ಪರಿಸರ ಸಂರಕ್ಷಣಾ ವೇದಿಕೆಯಿಂದ ಜಿಲ್ಲೆಯ ಗುಡ್ಡಗಾಡು ಪ್ರದೇಶ ಸೇರಿದಂತೆ ಎಲ್ಲಿ ಅಗತ್ಯವಿದೆಯೋ ಅಲ್ಲಿ ಸಸಿ ನೆಡಲು 5000 ಸಸಿಗಳನ್ನು ಪರಿಸರ ಕಾರ್ಯಕರ್ತರು ಬೇಡಿಕೆ ಸಲ್ಲಿಸಿದ್ದೇವೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಶಾಲಾ–ಕಾಲೇಜುಗಳ ವಿದ್ಯಾರ್ಥಿಗಳನ್ನು ಒಳಗೊಂಡು ಪರಿಸರ ಸಂರಕ್ಷಣೆಗೆ ಒತ್ತು ನೀಡಬೇಕು’ ಎಂದು ಪರಿಸರ ಸಂರಕ್ಷಣಾ ವೇದಿಕೆ ಅಧ್ಯಕ್ಷ ಗಿರೀಶ್‌ ಎಸ್‌. ದೇವರಮನಿ ಒತ್ತಾಯಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT