ನ್ಯಾಮತಿ ತಾಲ್ಲೂಕಿನ ಬಸವನಹಳ್ಳಿಯ ಮಹಿಳೆ, ದಾವಣಗೆರೆ ತಾಲ್ಲೂಕಿನ ಶ್ಯಾಗಲೆಯ ರೈತ, ಹರಿಹರ ತಾಲ್ಲೂಕಿನ ರಾಜನಹಳ್ಳಿಯ ಗರ್ಭಿಣಿ, ದೊಡ್ಡಬಾತಿಯ ಇಬ್ಬರು ಯುವತಿಯರು, ಅವರಗೊಳ್ಳದ ಇಬ್ಬರು ಯುವತಿಯರು ಎಲ್ಲರೂ ಹಳ್ಳಿಯಲ್ಲಿರುವವರು. ಆರೋಗ್ಯ ಸರಿ ಇಲ್ಲ ಎಂದು ಆಸ್ಪತ್ರೆಗೆ ಬಂದ ಬಳಿಕ ಗಂಟಲು ದ್ರವದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಿದಾಗ ಕೊರೊನಾ ಸೋಂಕು ಇರುವುದು ಪತ್ತೆಯಾದವರು. ಇದೇ ಆತಂಕಕ್ಕೆ ಕಾರಣವಾಗಿದೆ.