<p><strong>ದಾವಣಗೆರೆ</strong>: ಮಾರುಕಟ್ಟೆಯಲ್ಲಿ ಟೊಮೆಟೊ ದರ ಏರಿಳಿತದಲ್ಲೇ ಸಾಗಿದೆ. ಒಮ್ಮೊಮ್ಮೆ ಪ್ರತಿ ಕೆ.ಜಿ.ಗೆ ₹ 50ರಿಂದ ₹ 60ರವರೆಗೆ ದರ ಹೆಚ್ಚಿಸಿಕೊಳ್ಳುವ ಟೊಮೆಟೊ, ಕೆಲವೊಮ್ಮೆ ₹ 10ರಿಂದ ₹ 15ಕ್ಕೆ ಕುಸಿಯುತ್ತಿದೆ.</p>.<p>ವಾರದ ಹಿಂದೆಯಷ್ಟೇ ಇಲ್ಲಿನ ಕೆ.ಆರ್. ಮಾರುಕಟ್ಟೆಯಲ್ಲಿ ಟೊಮೆಟೊ ₹ 15ರಂತೆ ಮಾರಾಟವಾಗಿತ್ತು. ಶನಿವಾರ ₹ 25ಕ್ಕೆ ಕೆ.ಜಿ.ಯಂತೆ ಮಾರಾಟವಾಯಿತು.</p>.<p>25 ಕೆ.ಜಿ.ಯ ಟೊಮೆಟೊ ಬಾಕ್ಸ್ ವಾರದ ಹಿಂದೆ ₹ 200ರಿಂದ ₹ 250ಕ್ಕೆ ಬಿಕರಿಯಾಗಿತ್ತು. ಶುಕ್ರವಾರ ಹಾಗೂ ಶನಿವಾರ ಅದರ ದರ ₹ 400ಕ್ಕೆ ಮಾರಾಟವಾಗಿದೆ. ದರ ಏರಿಳಿತದ ನಡುವೆಯೂ ಈ ವಾರ ಟೊಮೆಟೊ ಬೆಳೆಗಾರರ ಕೈಹಿಡಿದಿದೆ. </p>.<p><strong>ಬಾಗಿದ ನುಗ್ಗೆಕಾಯಿ:</strong></p>.<p>ಕೆ.ಜಿ.ಗೆ ₹ 200ರ ಗಡಿ ದಾಟಿದ್ದ ನುಗ್ಗೆಕಾಯಿ ದರವು ವಾರದಿಂದ ಅಲ್ಪ ತಗ್ಗಿದ್ದು, ಇದೀಗ ₹ 150ರಂತೆ ಮಾರಾಟವಾಗುತ್ತಿದೆ. ಇನ್ನು ₹ 40 ಇದ್ದ ಹೀರೇಕಾಯಿ ₹ 20 ಹೆಚ್ಚಿಸಿಕೊಂಡು ₹ 60ರಂತೆ ಬಿಕರಿಯಾಗುತ್ತದೆ. </p>.<p>ಬೀನ್ಸ್ ದರವೂ ₹ 20 ಹೆಚ್ಚಿದ್ದು, ₹ 60ರಂತೆ ಮಾರಾಟವಾಗುತ್ತಿದೆ. ₹ 60ರಿಂದ ₹ 80ರ ಆಸುಪಾಸಿನಲ್ಲಿದ್ದ ಹಾಗಲಕಾಯಿ ದರ ₹ 40ಕ್ಕೆ ಕುಸಿದಿದ್ದು, ಗ್ರಾಹಕರಿಗೆ ‘ಸಿಹಿ’ ನೀಡಿದೆ. </p>.<p>ಹುಣಸೆಹಣ್ಣು ಕೆ.ಜಿ.ಗೆ ₹ 120, ಬೆಳ್ಳುಳ್ಳಿ ₹ 80ರಿಂದ ₹ 100, ಹಸಿಶುಂಠಿ ₹ 60, ನಿಂಬೆಹಣ್ಣು ₹ 10ಕ್ಕೆ 4ರಿಂದ 5ರಂತೆ ಮಾರಾಟವಾಗುತ್ತಿವೆ. </p>.<p>‘ಚಳಿಯ ವಾತಾವರಣದ ಕಾರಣಕ್ಕೆ ನಿಂಬೆಹಣ್ಣಿಗೆ ಹೇಳಿಕೊಳ್ಳುವಂತಹ ಬೇಡಿಕೆ ಇಲ್ಲ. ಬಿಸಿಲು ಹೆಚ್ಚಾದಂತೆ ನಿಂಬೆಹಣ್ಣಿಗೆ ಬೇಡಿಕೆ ಹೆಚ್ಚಾಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಉತ್ತಮ ದರ ದೊರೆಯುವ ನಿರೀಕ್ಷೆ ಇದೆ’ ಎಂದು ವ್ಯಾಪಾರಿ ಇಸ್ಮಾಯಿಲ್ ಹೇಳಿದರು.</p>.<p>ಕೊತ್ತಂಬರಿ ₹ 10ಕ್ಕೆ 4 ಸಿವುಡು, ಮೆಂತ್ಯೆ ₹ 10ಕ್ಕೆ 3, ಪುದೀನ ₹ 5ಕ್ಕೆ 1, ಸಬ್ಬಸಗಿ ₹ 10ಕ್ಕೆ 2, ಪಾಲಕ್ ₹ 5ಕ್ಕೆ 1, ರಾಜಗಿರಿ ₹ 5ಕ್ಕೆ 1 ಹಾಗೂ ಕರಿಬೇವು ಕೆ.ಜಿ.ಗೆ ₹ 150ರಿಂದ ₹ 160ಕ್ಕೆ ಮಾರಾಟವಾಗುತ್ತಿವೆ. </p>.<p><strong>ವ್ಯಾಪಾರ ಜೋರು:</strong> </p>.<p>ಜನವರಿ 25ರಂದು (ಭಾನುವಾರ) ಮದುವೆ, ಗೃಹಪ್ರವೇಶ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಸೂಕ್ತ ಎಂಬ ಕಾರಣ ಮಾರುಕಟ್ಟೆಯಲ್ಲಿ ಶನಿವಾರ ಗ್ರಾಹಕರ ದಂಡು ಕಂಡುಬಂತು. ಹಣ್ಣು– ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಖರೀದಿ ಜೋರಾಗಿತ್ತು.</p>.<p>‘ಜನವರಿ ಆರಂಭದಿಂದಲೂ ಹೇಳಿಕೊಳ್ಳುವಂತಹ ವ್ಯಾಪಾರ ನಡೆದಿರಲಿಲ್ಲ. ಆದರೆ, ಶನಿವಾರ ನಿರೀಕ್ಷೆಗೂ ಮೀರಿ ಗ್ರಾಹಕರು ಮಾರುಕಟ್ಟೆಗೆ ಆಗಮಿಸಿ ತರಕಾರಿ ಖರೀದಿಸಿದರು. ಉತ್ತಮ ವ್ಯಾಪಾರ ನಡೆಯಿತು’ ಎಂದು ವ್ಯಾಪಾರಿ ಎಸ್ಟಿಜಿ ರುದ್ರೇಶ್ ಸಂತಸ ಹಂಚಿಕೊಂಡರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ದಾವಣಗೆರೆ</strong>: ಮಾರುಕಟ್ಟೆಯಲ್ಲಿ ಟೊಮೆಟೊ ದರ ಏರಿಳಿತದಲ್ಲೇ ಸಾಗಿದೆ. ಒಮ್ಮೊಮ್ಮೆ ಪ್ರತಿ ಕೆ.ಜಿ.ಗೆ ₹ 50ರಿಂದ ₹ 60ರವರೆಗೆ ದರ ಹೆಚ್ಚಿಸಿಕೊಳ್ಳುವ ಟೊಮೆಟೊ, ಕೆಲವೊಮ್ಮೆ ₹ 10ರಿಂದ ₹ 15ಕ್ಕೆ ಕುಸಿಯುತ್ತಿದೆ.</p>.<p>ವಾರದ ಹಿಂದೆಯಷ್ಟೇ ಇಲ್ಲಿನ ಕೆ.ಆರ್. ಮಾರುಕಟ್ಟೆಯಲ್ಲಿ ಟೊಮೆಟೊ ₹ 15ರಂತೆ ಮಾರಾಟವಾಗಿತ್ತು. ಶನಿವಾರ ₹ 25ಕ್ಕೆ ಕೆ.ಜಿ.ಯಂತೆ ಮಾರಾಟವಾಯಿತು.</p>.<p>25 ಕೆ.ಜಿ.ಯ ಟೊಮೆಟೊ ಬಾಕ್ಸ್ ವಾರದ ಹಿಂದೆ ₹ 200ರಿಂದ ₹ 250ಕ್ಕೆ ಬಿಕರಿಯಾಗಿತ್ತು. ಶುಕ್ರವಾರ ಹಾಗೂ ಶನಿವಾರ ಅದರ ದರ ₹ 400ಕ್ಕೆ ಮಾರಾಟವಾಗಿದೆ. ದರ ಏರಿಳಿತದ ನಡುವೆಯೂ ಈ ವಾರ ಟೊಮೆಟೊ ಬೆಳೆಗಾರರ ಕೈಹಿಡಿದಿದೆ. </p>.<p><strong>ಬಾಗಿದ ನುಗ್ಗೆಕಾಯಿ:</strong></p>.<p>ಕೆ.ಜಿ.ಗೆ ₹ 200ರ ಗಡಿ ದಾಟಿದ್ದ ನುಗ್ಗೆಕಾಯಿ ದರವು ವಾರದಿಂದ ಅಲ್ಪ ತಗ್ಗಿದ್ದು, ಇದೀಗ ₹ 150ರಂತೆ ಮಾರಾಟವಾಗುತ್ತಿದೆ. ಇನ್ನು ₹ 40 ಇದ್ದ ಹೀರೇಕಾಯಿ ₹ 20 ಹೆಚ್ಚಿಸಿಕೊಂಡು ₹ 60ರಂತೆ ಬಿಕರಿಯಾಗುತ್ತದೆ. </p>.<p>ಬೀನ್ಸ್ ದರವೂ ₹ 20 ಹೆಚ್ಚಿದ್ದು, ₹ 60ರಂತೆ ಮಾರಾಟವಾಗುತ್ತಿದೆ. ₹ 60ರಿಂದ ₹ 80ರ ಆಸುಪಾಸಿನಲ್ಲಿದ್ದ ಹಾಗಲಕಾಯಿ ದರ ₹ 40ಕ್ಕೆ ಕುಸಿದಿದ್ದು, ಗ್ರಾಹಕರಿಗೆ ‘ಸಿಹಿ’ ನೀಡಿದೆ. </p>.<p>ಹುಣಸೆಹಣ್ಣು ಕೆ.ಜಿ.ಗೆ ₹ 120, ಬೆಳ್ಳುಳ್ಳಿ ₹ 80ರಿಂದ ₹ 100, ಹಸಿಶುಂಠಿ ₹ 60, ನಿಂಬೆಹಣ್ಣು ₹ 10ಕ್ಕೆ 4ರಿಂದ 5ರಂತೆ ಮಾರಾಟವಾಗುತ್ತಿವೆ. </p>.<p>‘ಚಳಿಯ ವಾತಾವರಣದ ಕಾರಣಕ್ಕೆ ನಿಂಬೆಹಣ್ಣಿಗೆ ಹೇಳಿಕೊಳ್ಳುವಂತಹ ಬೇಡಿಕೆ ಇಲ್ಲ. ಬಿಸಿಲು ಹೆಚ್ಚಾದಂತೆ ನಿಂಬೆಹಣ್ಣಿಗೆ ಬೇಡಿಕೆ ಹೆಚ್ಚಾಗಲಿದೆ. ಇನ್ನು ಕೆಲವೇ ದಿನಗಳಲ್ಲಿ ಉತ್ತಮ ದರ ದೊರೆಯುವ ನಿರೀಕ್ಷೆ ಇದೆ’ ಎಂದು ವ್ಯಾಪಾರಿ ಇಸ್ಮಾಯಿಲ್ ಹೇಳಿದರು.</p>.<p>ಕೊತ್ತಂಬರಿ ₹ 10ಕ್ಕೆ 4 ಸಿವುಡು, ಮೆಂತ್ಯೆ ₹ 10ಕ್ಕೆ 3, ಪುದೀನ ₹ 5ಕ್ಕೆ 1, ಸಬ್ಬಸಗಿ ₹ 10ಕ್ಕೆ 2, ಪಾಲಕ್ ₹ 5ಕ್ಕೆ 1, ರಾಜಗಿರಿ ₹ 5ಕ್ಕೆ 1 ಹಾಗೂ ಕರಿಬೇವು ಕೆ.ಜಿ.ಗೆ ₹ 150ರಿಂದ ₹ 160ಕ್ಕೆ ಮಾರಾಟವಾಗುತ್ತಿವೆ. </p>.<p><strong>ವ್ಯಾಪಾರ ಜೋರು:</strong> </p>.<p>ಜನವರಿ 25ರಂದು (ಭಾನುವಾರ) ಮದುವೆ, ಗೃಹಪ್ರವೇಶ ಹಾಗೂ ಇನ್ನಿತರ ಶುಭ ಸಮಾರಂಭಗಳಿಗೆ ಸೂಕ್ತ ಎಂಬ ಕಾರಣ ಮಾರುಕಟ್ಟೆಯಲ್ಲಿ ಶನಿವಾರ ಗ್ರಾಹಕರ ದಂಡು ಕಂಡುಬಂತು. ಹಣ್ಣು– ತರಕಾರಿ ಹಾಗೂ ದಿನಸಿ ಸಾಮಗ್ರಿಗಳ ಖರೀದಿ ಜೋರಾಗಿತ್ತು.</p>.<p>‘ಜನವರಿ ಆರಂಭದಿಂದಲೂ ಹೇಳಿಕೊಳ್ಳುವಂತಹ ವ್ಯಾಪಾರ ನಡೆದಿರಲಿಲ್ಲ. ಆದರೆ, ಶನಿವಾರ ನಿರೀಕ್ಷೆಗೂ ಮೀರಿ ಗ್ರಾಹಕರು ಮಾರುಕಟ್ಟೆಗೆ ಆಗಮಿಸಿ ತರಕಾರಿ ಖರೀದಿಸಿದರು. ಉತ್ತಮ ವ್ಯಾಪಾರ ನಡೆಯಿತು’ ಎಂದು ವ್ಯಾಪಾರಿ ಎಸ್ಟಿಜಿ ರುದ್ರೇಶ್ ಸಂತಸ ಹಂಚಿಕೊಂಡರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>