ದಾವಣಗೆರೆ: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಿವೃತ್ತ ಅಸಂಘಟಿತ ವಲಯದ ಕಾರ್ಮಿಕರ ಯೂನಿಯನ್ಗಳ ಒಕ್ಕೂಟದಿಂದ ಇಲ್ಲಿನ ಉಪ ವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ಕೊರೊನಾದಿಂದ ನಿವೃತ್ತ ಅಸಂಘಟಿತ ಕಾರ್ಮಿಕರು ಸಂಕಷ್ಟಕ್ಕೀಡಾಗಿದ್ದು, ಅವರ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
ಪಿಂಚಣಿಯಾಗಿ ತಿಂಗಳಿಗೆ ₹ 6000 ನಿಗದಿಪಡಿಸಬೇಕು.ಜನವರಿ 2020ರಿಂದ ಆಗಸ್ಟ್ 2020ರ ವರೆಗೆ ಯಾವುದೇ ಮಾಹಿತಿ ನೀಡದೆ ಅರ್ಹ ಫಲಾನುಭವಿಗಳಿಗೆ ಸ್ಥಗಿತಗೊಳಿಸಿರುವಪಿಂಚಣಿ ನೀಡಬೇಕು. ಕೋವಿಡ್-19ರ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ನಿವೃತ್ತ ಹಿರಿಯ ಕಾರ್ಮಿಕರ ಮನೆ ಬಾಗಿಲಿಗೆ ಆರೋಗ್ಯ ವ್ಯವಸ್ಥೆ ಮತ್ತು ಉಚಿತಚಿಕಿತ್ಸೆ ನೀಡಬೇಕು. ಮಾತ್ರೆಗಳನ್ನು ಮನೆಗೆ ತಲುಪಿಸಬೇಕು.ಸಮಾಜದ ಆಧಾರ ಸ್ತಂಭಗಳಾಗಿರುವಂತಹ ನಿವೃತ್ತ ಹಿರಿಯ ಶ್ರಮ ಜೀವಿಗಳಿಗೆ ಮಧ್ಯಾಹ್ನದ ಬಿಸಿಯೂಟಕೊಡಲು ಕ್ರಮ ಕೈಗೊಳ್ಳಬೇಕು.ಪ್ರತಿ ತಿಂಗಳು ಉಪವಿಭಾಗಾಧಿಕಾರಿ ನೇತೃತ್ವದಲ್ಲಿ ಪಿಂಚಣಿ ಅದಾಲತ್ ನಡೆಸಬೇಕು ಎಂದು ಒತ್ತಾಯಿಸಿದರು.
ಒಕ್ಕೂಟದ ಕಾರ್ಯದರ್ಶಿ ಜಬೀನಾಖಾನಂ, ಜಿಲ್ಲಾ ಅಧ್ಯಕ್ಷ ಬಾಬು ಸಾಬ್, ಉಪಾಧ್ಯಕ್ಷ ಖಮರುನ್ನೀಸಾ, ಕಾರ್ಯಕರ್ತ ಕರಿಬಸಪ್ಪ ಎಂ., ಕಾರ್ಯಕರ್ತ ಅನ್ವರ್ಖಾನ್, ಸಿಐಟಿಯು ಮುಖಂಡರಾದ ಶ್ರೀನಿವಾಸ್, ಅಬ್ದುಲ್ ಘನಿ ತಾಹೀರ್ ಭಾಗವಹಿಸಿದ್ದರು.