ಚಿಕ್ಕಬಳ್ಳಾಪುರ ಜಿಲ್ಲೆ ಚಿಂತಾಮಣಿಯ ವಾಸಿ ಎನ್ನಲಾದ ಯುವತಿಯೊಬ್ಬರು ತಾವು ಪ್ರೇಮಿಸಿದ ಯುವಕನೊಂದಿಗೆ ಇಲ್ಲಿನ ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಮದುವೆ ನೋಂದಣಿಗೆ ಈ ಶಾಲೆಯ ದೃಢೀಕರಣ ಪತ್ರ ಬಳಸಿಕೊಂಡಿರುವ ಶಂಕೆ ಇದೆ. ಯುವಕ ಮತ್ತು ಯುವತಿ ಇಬ್ಬರೂ ಹರಿಹರ ತಾಲ್ಲೂಕಿನ ವಾಸಿಗಳಲ್ಲ. ಮದುವೆ ನೋಂದಣಿ ಮಾಡಿಸಲು ದಂಪತಿ ಪೈಕಿ ಒಬ್ಬರು ಸ್ಥಳೀಯ ತಾಲ್ಲೂಕು ವಾಸಿಯಾಗಿರಬೇಕು ಎಂಬ ನಿಯಮವಿದೆ. ಆದ ಕಾರಣ ಯುವತಿ ತಾಲ್ಲೂಕಿನ ವಾಸಿ ಎಂದು ತೋರಿಸಲು ಈ ಶಾಲೆಯಿಂದ ದೃಢೀಕರಣ ಪತ್ರ ಪಡೆದಿದ್ದಾರೆ ಎಂದು ಮಹೇಶ್ ಅವರು ಆರೋಪಿಸಿದ್ದಾರೆ.