ಅನುದಾನದ ಕೊರತೆಯ ನೆಪ: ‘ಕಟ್ಟಡ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಆದರೆ, ಅನುದಾನದ ಕೊರತೆ ಉಂಟಾಗಿ ಸ್ವಲ್ಪ ವಿಳಂಬವಾಗಿದೆಯಷ್ಟೆ. ಒಟ್ಟಾರೆ ₹ 3 ಕೋಟಿ ಅನುದಾನದಲ್ಲಿ ₹ 2.25 ಕೋಟಿ ಬಂದಿದೆ. ಇನ್ನೂ ₹ 75 ಕೋಟಿ ಬರಬೇಕಿದೆ. ಈ ಬಗ್ಗೆ ವರದಿಗಳನ್ನು ಸರ್ಕಾರಕ್ಕೆ ಹಾಗೂ ಮುಖ್ಯ ಕಚೇರಿಗೆ ಕಳುಹಿಸುತ್ತಿದ್ದೇವೆ’ ಎನ್ನುತ್ತಾರೆ ಕೆಆರ್ಡಿಐಎಲ್ ಕಾರ್ಯನಿರ್ವಾಹಕ ಎಂಜಿನಿಯರ್ ತೀರ್ಥಲಿಂಗಪ್ಪ.