<p><strong>ದಾವಣಗೆರೆ</strong>: ಅನುಮತಿ ಇಲ್ಲದೆ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡಿದ ಆರೋಪದ ಮೇರೆಗೆ ರಾಜ್ಯದ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ 26 ಜನರನ್ನು ಆಫ್ರಿಕಾದ ಘಾನಾದಲ್ಲಿ ಬಂಧಿಸಲಾಗಿದೆ.</p><p>ಬಂಧಿತರಲ್ಲಿ 12 ಜನ ಮಹಿಳೆಯರು ಮತ್ತು 14 ಜನ ಪುರುಷರಿದ್ದಾರೆ. ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ಇವರು ಬಿಸಿನೆಸ್ ವೀಸಾದ ಮೇಲೆ ಆಫ್ರಿಕಾದ ಪುಟ್ಟ ರಾಷ್ಟ್ರ ಘಾನಾದ ಟುಮು ನಗರಕ್ಕೆ ತೆರಳಿದ್ದರು.</p><p>‘ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗೆ ಸೇರಿದ 26 ಜನರಲ್ಲಿ 24 ಜನರು ಆರು ತಿಂಗಳ ಹಿಂದೆ ಹಾಗೂ ಇಬ್ಬರು ಎರಡು ತಿಂಗಳ ಹಿಂದೆ ಘಾನಾಗೆ ತೆರಳಿದ್ದರು. ಇವರನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿದೆ ಎಂಬುದಾಗಿ ಘಾನಾದಲ್ಲಿರುವ ಸಮುದಾಯದ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಕುರಿತು ಘಾನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ’ ಎಂದು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ಅಧ್ಯಕ್ಷ ಆರ್. ಪುನೀತ್ ಕುಮಾರ್ ತಿಳಿಸಿದ್ದಾರೆ.</p><p>‘ಘಾನಾ ಸರ್ಕಾರದ ಅನುಮತಿ ಪಡೆಯದೇ ಗಿಡಮೂಲಿಕೆಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ನಾಗರಿಕರು ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಪ್ರವೃತ್ತರಾದ ಪೊಲೀಸರು ಮೊದಲು ನಾಲ್ವರನ್ನು ಬಂಧಿಸಿದ್ದರು. ಬಳಿಕ ವಾಸಸ್ಥಳವನ್ನು ಪತ್ತೆ ಮಾಡಿ ಉಳಿದವರನ್ನು ಬಂಧಿಸಿದ್ದಾರೆ’ ಎಂದು ಮಾಹಿತಿ ನೀಡಿದರು.</p><p>‘ಸಮುದಾಯದ ಜನರು ಪ್ರತಿ ವರ್ಷ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ಆಫ್ರಿಕಾದ ವಿವಿಧ ದೇಶಗಳಿಗೆ ತೆರಳುತ್ತಾರೆ. ಈ ಉತ್ಪನ್ನಗಳು ನೈಸರ್ಗಿಕವಾಗಿರುವುದರಿಂದ ಆಫ್ರಿಕನ್ ದೇಶಗಳಲ್ಲಿ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ, ಘಾನಾದಲ್ಲಿ ನಿಯಮಗಳು ಭಿನ್ನವಾಗಿವೆ. ಈ ಬಗ್ಗೆ ಅರಿವಿರದೇ ತೊಂದರೆ ಆಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಕ್ಷಣ ಮಧ್ಯಪ್ರವೇಶಿಸಿ ಹಕ್ಕಿಪಿಕ್ಕಿ ಸಮುದಾಯದ ಜನರನ್ನು ಸ್ವದೇಶಕ್ಕೆ ಕರೆತರಲು ಸಹಾಯ ನೀಡಬೇಕು’ ಎಂದು ಮನವಿ </p>
<p><strong>ದಾವಣಗೆರೆ</strong>: ಅನುಮತಿ ಇಲ್ಲದೆ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡಿದ ಆರೋಪದ ಮೇರೆಗೆ ರಾಜ್ಯದ ಹಕ್ಕಿಪಿಕ್ಕಿ ಸಮುದಾಯಕ್ಕೆ ಸೇರಿದ 26 ಜನರನ್ನು ಆಫ್ರಿಕಾದ ಘಾನಾದಲ್ಲಿ ಬಂಧಿಸಲಾಗಿದೆ.</p><p>ಬಂಧಿತರಲ್ಲಿ 12 ಜನ ಮಹಿಳೆಯರು ಮತ್ತು 14 ಜನ ಪುರುಷರಿದ್ದಾರೆ. ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ಇವರು ಬಿಸಿನೆಸ್ ವೀಸಾದ ಮೇಲೆ ಆಫ್ರಿಕಾದ ಪುಟ್ಟ ರಾಷ್ಟ್ರ ಘಾನಾದ ಟುಮು ನಗರಕ್ಕೆ ತೆರಳಿದ್ದರು.</p><p>‘ದಾವಣಗೆರೆ ಹಾಗೂ ಶಿವಮೊಗ್ಗ ಜಿಲ್ಲೆಗೆ ಸೇರಿದ 26 ಜನರಲ್ಲಿ 24 ಜನರು ಆರು ತಿಂಗಳ ಹಿಂದೆ ಹಾಗೂ ಇಬ್ಬರು ಎರಡು ತಿಂಗಳ ಹಿಂದೆ ಘಾನಾಗೆ ತೆರಳಿದ್ದರು. ಇವರನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿದೆ ಎಂಬುದಾಗಿ ಘಾನಾದಲ್ಲಿರುವ ಸಮುದಾಯದ ಸದಸ್ಯರೊಬ್ಬರು ತಿಳಿಸಿದ್ದಾರೆ. ಈ ಕುರಿತು ಘಾನಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ಮಾಹಿತಿ ನೀಡಲಾಗಿದೆ’ ಎಂದು ಕರ್ನಾಟಕ ಹಕ್ಕಿಪಿಕ್ಕಿ ಬುಡಕಟ್ಟು ಸಂಘಟನೆಯ ಅಧ್ಯಕ್ಷ ಆರ್. ಪುನೀತ್ ಕುಮಾರ್ ತಿಳಿಸಿದ್ದಾರೆ.</p><p>‘ಘಾನಾ ಸರ್ಕಾರದ ಅನುಮತಿ ಪಡೆಯದೇ ಗಿಡಮೂಲಿಕೆಗಳನ್ನು ಮಾರಾಟ ಮಾಡುತ್ತಿರುವ ಬಗ್ಗೆ ನಾಗರಿಕರು ಪೊಲೀಸರಿಗೆ ದೂರು ನೀಡಿದ್ದರು. ಕಾರ್ಯಪ್ರವೃತ್ತರಾದ ಪೊಲೀಸರು ಮೊದಲು ನಾಲ್ವರನ್ನು ಬಂಧಿಸಿದ್ದರು. ಬಳಿಕ ವಾಸಸ್ಥಳವನ್ನು ಪತ್ತೆ ಮಾಡಿ ಉಳಿದವರನ್ನು ಬಂಧಿಸಿದ್ದಾರೆ’ ಎಂದು ಮಾಹಿತಿ ನೀಡಿದರು.</p><p>‘ಸಮುದಾಯದ ಜನರು ಪ್ರತಿ ವರ್ಷ ಗಿಡಮೂಲಿಕೆ ಉತ್ಪನ್ನಗಳನ್ನು ಮಾರಾಟ ಮಾಡಲು ಆಫ್ರಿಕಾದ ವಿವಿಧ ದೇಶಗಳಿಗೆ ತೆರಳುತ್ತಾರೆ. ಈ ಉತ್ಪನ್ನಗಳು ನೈಸರ್ಗಿಕವಾಗಿರುವುದರಿಂದ ಆಫ್ರಿಕನ್ ದೇಶಗಳಲ್ಲಿ ಅನುಮತಿ ಪಡೆಯುವ ಅಗತ್ಯವಿಲ್ಲ. ಆದರೆ, ಘಾನಾದಲ್ಲಿ ನಿಯಮಗಳು ಭಿನ್ನವಾಗಿವೆ. ಈ ಬಗ್ಗೆ ಅರಿವಿರದೇ ತೊಂದರೆ ಆಗಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಕ್ಷಣ ಮಧ್ಯಪ್ರವೇಶಿಸಿ ಹಕ್ಕಿಪಿಕ್ಕಿ ಸಮುದಾಯದ ಜನರನ್ನು ಸ್ವದೇಶಕ್ಕೆ ಕರೆತರಲು ಸಹಾಯ ನೀಡಬೇಕು’ ಎಂದು ಮನವಿ </p>