<p><strong>ಮಲೇಬೆನ್ನೂರು:</strong> ಸಮೀಪದ ಆದಾಪುರ ಗ್ರಾಮದ ಗ್ರಾಮ ದೇವತೆಯ ರಾಜಬೀದಿ ಉತ್ಸವ ಮಂಗಳವಾರ ತಡರಾತ್ರಿ ವೈಭವದಿಂದ ಜರುಗಿತು. </p>.<p>ಟ್ರ್ಯಾಕ್ಟರ್ಗಳಲ್ಲಿ ಅಲಂಕರಿಸಿದ ದುರ್ಗಮ್ಮ, ಕರಿಯಮ್ಮ ಹಾಗೂ ಆಂಜನೇಯ ಸ್ವಾಮಿ ದೇವರುಗಳ ಉತ್ಸವವನ್ನು ಭಕ್ತರು ಕಣ್ತುಂಬಿಕೊಂಡರು. </p>.<p>ಮಂಗಳವಾದ್ಯ, ತಮಟೆ, ಡೊಳ್ಳು, ನಾಸಿಕ್ ಡೋಲು, ಭಜನಾ ತಂಡಗಳು ಉತ್ಸವದ ಕಳೆ ಹೆಚ್ಚಿಸಿದವು. </p>.<p>ಮಕ್ಕಳು, ಹಿರಿಯರು ಯುವಪಡೆ ಉತ್ಸಾಹದಿಂದ ಪಾಲ್ಗೊಂಡಿದ್ದರು. ಗ್ರಾಮದ ಬೀದಿಗಳು ಝಗಮಗಿಸಿದವು. ದೇವಾಲಯವನ್ನು ವಿವಿಧ ಬಗೆಯ ಹೂವಿಗಳಿಂದ ಅಲಂಕರಿಸಲಾಗಿತ್ತು. </p>.<p>ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯ ಜನತೆ ಆಗಮಿಸಿದ್ದರು. ಮುಂಗಾರು ಪೂರ್ವ ಮಳೆ ಸ್ವಲ್ಪ ಸಮಯ ಸುರಿದ ಕಾರಣ ಧಗೆ ತಣಿಸಿತು. ಪೊಲೀಸರು ಭದ್ರತೆ ಒದಗಿಸಿದ್ದರು.</p>
<p><strong>ಮಲೇಬೆನ್ನೂರು:</strong> ಸಮೀಪದ ಆದಾಪುರ ಗ್ರಾಮದ ಗ್ರಾಮ ದೇವತೆಯ ರಾಜಬೀದಿ ಉತ್ಸವ ಮಂಗಳವಾರ ತಡರಾತ್ರಿ ವೈಭವದಿಂದ ಜರುಗಿತು. </p>.<p>ಟ್ರ್ಯಾಕ್ಟರ್ಗಳಲ್ಲಿ ಅಲಂಕರಿಸಿದ ದುರ್ಗಮ್ಮ, ಕರಿಯಮ್ಮ ಹಾಗೂ ಆಂಜನೇಯ ಸ್ವಾಮಿ ದೇವರುಗಳ ಉತ್ಸವವನ್ನು ಭಕ್ತರು ಕಣ್ತುಂಬಿಕೊಂಡರು. </p>.<p>ಮಂಗಳವಾದ್ಯ, ತಮಟೆ, ಡೊಳ್ಳು, ನಾಸಿಕ್ ಡೋಲು, ಭಜನಾ ತಂಡಗಳು ಉತ್ಸವದ ಕಳೆ ಹೆಚ್ಚಿಸಿದವು. </p>.<p>ಮಕ್ಕಳು, ಹಿರಿಯರು ಯುವಪಡೆ ಉತ್ಸಾಹದಿಂದ ಪಾಲ್ಗೊಂಡಿದ್ದರು. ಗ್ರಾಮದ ಬೀದಿಗಳು ಝಗಮಗಿಸಿದವು. ದೇವಾಲಯವನ್ನು ವಿವಿಧ ಬಗೆಯ ಹೂವಿಗಳಿಂದ ಅಲಂಕರಿಸಲಾಗಿತ್ತು. </p>.<p>ಸುತ್ತಮುತ್ತಲ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯ ಜನತೆ ಆಗಮಿಸಿದ್ದರು. ಮುಂಗಾರು ಪೂರ್ವ ಮಳೆ ಸ್ವಲ್ಪ ಸಮಯ ಸುರಿದ ಕಾರಣ ಧಗೆ ತಣಿಸಿತು. ಪೊಲೀಸರು ಭದ್ರತೆ ಒದಗಿಸಿದ್ದರು.</p>