<p>ಪ್ರಜಾವಾಣಿ ವಾರ್ತೆ</p>.<p>ಹರಪನಹಳ್ಳಿ: ‘ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಶೇ 100ರಷ್ಟು ಸಾಧನೆ ಪುರಸಭೆ ಕಡತದಲ್ಲಿದೆ. ಆದರೆ, ಸಾರ್ವಜನಿಕರು ಚೊಂಬು ಹಿಡಿದು ಬಹಿರ್ದೆಸೆಗೆ ಹೋಗುವುದು ತಪ್ಪಿಲ್ಲ’ ಎಂದು ಪುರಸಭೆ ಸದಸ್ಯ ಎಂ.ವಿ. ಅಂಜಿನಪ್ಪ ವಿಷಾದಿಸಿದರು.</p>.<p>ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಇಜಂತಕರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ವೈಯಕ್ತಿಕ ಶೌಚಾಲಯ ನಿರ್ಮಾಣದ ನೆಪದಲ್ಲಿ ಬೋಗಸ್ ಬಿಲ್ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.</p>.<p>ಸದಸ್ಯ ರೊಕ್ಕಪ್ಪ, ‘ಎರಡು ವರ್ಷದ ಹಿಂದೆ ಕಟ್ಟಿರುವ ವೈಯಕ್ತಿಕ ಶೌಚಾಲಯಕ್ಕೆ ಸಹಾಯಧನ ಕೊಟ್ಟಿಲ್ಲ ಏಕೆ’ ಎಂದು ಪ್ರಶ್ನಿಸಿದರು.</p>.<p>ಸದಸ್ಯ ರೆಹಮಾನ್ ಮಾತನಾಡಿ, ‘ವಿದ್ಯುತ್, ನೀರು ಸೇರಿ ಮೂಲಸೌಕರ್ಯಕ್ಕೆ ಬರುವ ಜನರಿಗೆ ನಿರಾಕ್ಷೇಪಣಾ ಪತ್ರ ಕೊಡಲು ಅಲೆದಾಡಿಸಬೇಡಿ. ರದ್ದಾಗಿರುವ 1,792 ಮನೆ ಖಾತೆಗಳನ್ನು ಮುಂದುವರಿಸಿ’ ಎಂದು ಒತ್ತಾಯಿಸಿದರು.</p>.<p>ಇದಕ್ಕೆ ದನಿಗೂಡಿಸಿದ ಎಂ.ವಿ. ಅಂಜಿನಪ್ಪ, ‘ಖಾತಾ ಬದಲಾವಣೆಗೆ ಸದಸ್ಯರು ಶಿಫಾರಸು ಮಾಡಿದರೆ ಆಗಲ್ಲ ಎಂದು ಹೇಳಲಾಗುತ್ತದೆ. ಆದರೆ, ಸಾರ್ವಜನಿಕರಿಂದ ಹಣ ಪಡೆದು ಮಾಡಿಕೊಡುತ್ತಾರೆ’ ಎಂದು ಆರೋಪಿಸಿದರು.</p>.<p>ಸದಸ್ಯ ಕೊಟ್ರೇಶ್ ಅವರು ವೃತ್ತಗಳಿಗೆ ನಾಮಕರಣ ಮಾಡುವ ವಿಷಯ ಪ್ರಸ್ತಾಪಿಸಿದರು. ಈ ಕುರಿತು ಸುದೀರ್ಘ ಚರ್ಚೆ ನಡೆದು, ಪಟ್ಟಣದ ವ್ಯಾಪ್ತಿಯ ವಿವಿಧ ವೃತ್ತಗಳಿಗೆ ನಾಮಕರಣ ಮಾಡಲು ಶಾಸಕರೊಂದಿಗೆ ಚರ್ಚಿಸಿ ನಿರ್ಧರಿಸಲು ಸಭೆ ತೀರ್ಮಾನಿಸಿತು.</p>.<p>ಸದಸ್ಯ ಗೊಂಗಡಿ ನಾಗರಾಜ್ ಮಾತನಾಡಿ, ‘ವಿದ್ಯುತ್ ದೀಪಗಳು ನಾಪತ್ತೆ ಆಗುತ್ತಿವೆ. ಗುಣಮಟ್ಟವಿಲ್ಲ’ ಎಂದು ಸಭೆಯ ಗಮನಸೆಳೆದರು. </p>.<p>ಸದಸ್ಯ ರೊಕ್ಕಪ್ಪ, ‘ಸರ್ಕಾರಿ ಶಾಲೆಯಲ್ಲಿ ಕುಡಿಯುವ ನೀರಿನ ಕೊರತೆಯಿದ್ದು ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.</p>.<p>ಉಪಾಧ್ಯಕ್ಷೆ ಭೀಮವ್ವ ಸಣ್ಣಹಾಲಪ್ಪ, ‘ಕಂದಾಯ ಶಾಖೆ ಮಹಿಳಾ ಅಧಿಕಾರಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು’ ಎಂದರು. ಇದಕ್ಕೆ ಸದಸ್ಯರಾದ ಅಂಜಿನಪ್ಪ, ರೆಹಮಾನ್, ವೆಂಕಟೇಶ್ ಅವರೂ ಸಹಮತ ವ್ಯಕ್ತಪಡಿಸಿದರು.</p>.<p>ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ‘ವಿಷಯವನ್ನು ವೈಯಕ್ತಿಕವಾಗಿ ಪರಿಗಣಿಸದೆ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು’ ಎಂದು ಸಿಬ್ಬಂದಿಗೆ ಸೂಚಿಸಿದರು.</p>.<p>ಸದಸ್ಯರಾದ ಎಚ್.ಎಂ. ಅಶೋಕ್, ಜಾವಿದ್, ನಾಗರಾಜ್, ಕಿರಣ್, ಗಣೇಶ್, ರಾಘವೇಂದ್ರ ಶೆಟ್ಟಿ, ಪ್ರಕಾಶ್ ವಿವಿಧ ವಾರ್ಡ್ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p>ಹರಪನಹಳ್ಳಿ: ‘ವೈಯಕ್ತಿಕ ಶೌಚಾಲಯ ನಿರ್ಮಾಣಕ್ಕೆ ಶೇ 100ರಷ್ಟು ಸಾಧನೆ ಪುರಸಭೆ ಕಡತದಲ್ಲಿದೆ. ಆದರೆ, ಸಾರ್ವಜನಿಕರು ಚೊಂಬು ಹಿಡಿದು ಬಹಿರ್ದೆಸೆಗೆ ಹೋಗುವುದು ತಪ್ಪಿಲ್ಲ’ ಎಂದು ಪುರಸಭೆ ಸದಸ್ಯ ಎಂ.ವಿ. ಅಂಜಿನಪ್ಪ ವಿಷಾದಿಸಿದರು.</p>.<p>ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಅಧ್ಯಕ್ಷ ಇಜಂತಕರ್ ಮಂಜುನಾಥ್ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.</p>.<p>‘ವೈಯಕ್ತಿಕ ಶೌಚಾಲಯ ನಿರ್ಮಾಣದ ನೆಪದಲ್ಲಿ ಬೋಗಸ್ ಬಿಲ್ ಮಾಡಲಾಗಿದೆ. ಈ ಬಗ್ಗೆ ತನಿಖೆ ನಡೆಸಬೇಕು’ ಎಂದು ಒತ್ತಾಯಿಸಿದರು.</p>.<p>ಸದಸ್ಯ ರೊಕ್ಕಪ್ಪ, ‘ಎರಡು ವರ್ಷದ ಹಿಂದೆ ಕಟ್ಟಿರುವ ವೈಯಕ್ತಿಕ ಶೌಚಾಲಯಕ್ಕೆ ಸಹಾಯಧನ ಕೊಟ್ಟಿಲ್ಲ ಏಕೆ’ ಎಂದು ಪ್ರಶ್ನಿಸಿದರು.</p>.<p>ಸದಸ್ಯ ರೆಹಮಾನ್ ಮಾತನಾಡಿ, ‘ವಿದ್ಯುತ್, ನೀರು ಸೇರಿ ಮೂಲಸೌಕರ್ಯಕ್ಕೆ ಬರುವ ಜನರಿಗೆ ನಿರಾಕ್ಷೇಪಣಾ ಪತ್ರ ಕೊಡಲು ಅಲೆದಾಡಿಸಬೇಡಿ. ರದ್ದಾಗಿರುವ 1,792 ಮನೆ ಖಾತೆಗಳನ್ನು ಮುಂದುವರಿಸಿ’ ಎಂದು ಒತ್ತಾಯಿಸಿದರು.</p>.<p>ಇದಕ್ಕೆ ದನಿಗೂಡಿಸಿದ ಎಂ.ವಿ. ಅಂಜಿನಪ್ಪ, ‘ಖಾತಾ ಬದಲಾವಣೆಗೆ ಸದಸ್ಯರು ಶಿಫಾರಸು ಮಾಡಿದರೆ ಆಗಲ್ಲ ಎಂದು ಹೇಳಲಾಗುತ್ತದೆ. ಆದರೆ, ಸಾರ್ವಜನಿಕರಿಂದ ಹಣ ಪಡೆದು ಮಾಡಿಕೊಡುತ್ತಾರೆ’ ಎಂದು ಆರೋಪಿಸಿದರು.</p>.<p>ಸದಸ್ಯ ಕೊಟ್ರೇಶ್ ಅವರು ವೃತ್ತಗಳಿಗೆ ನಾಮಕರಣ ಮಾಡುವ ವಿಷಯ ಪ್ರಸ್ತಾಪಿಸಿದರು. ಈ ಕುರಿತು ಸುದೀರ್ಘ ಚರ್ಚೆ ನಡೆದು, ಪಟ್ಟಣದ ವ್ಯಾಪ್ತಿಯ ವಿವಿಧ ವೃತ್ತಗಳಿಗೆ ನಾಮಕರಣ ಮಾಡಲು ಶಾಸಕರೊಂದಿಗೆ ಚರ್ಚಿಸಿ ನಿರ್ಧರಿಸಲು ಸಭೆ ತೀರ್ಮಾನಿಸಿತು.</p>.<p>ಸದಸ್ಯ ಗೊಂಗಡಿ ನಾಗರಾಜ್ ಮಾತನಾಡಿ, ‘ವಿದ್ಯುತ್ ದೀಪಗಳು ನಾಪತ್ತೆ ಆಗುತ್ತಿವೆ. ಗುಣಮಟ್ಟವಿಲ್ಲ’ ಎಂದು ಸಭೆಯ ಗಮನಸೆಳೆದರು. </p>.<p>ಸದಸ್ಯ ರೊಕ್ಕಪ್ಪ, ‘ಸರ್ಕಾರಿ ಶಾಲೆಯಲ್ಲಿ ಕುಡಿಯುವ ನೀರಿನ ಕೊರತೆಯಿದ್ದು ಒದಗಿಸಲು ಕ್ರಮ ಕೈಗೊಳ್ಳಬೇಕು’ ಎಂದು ಆಗ್ರಹಿಸಿದರು.</p>.<p>ಉಪಾಧ್ಯಕ್ಷೆ ಭೀಮವ್ವ ಸಣ್ಣಹಾಲಪ್ಪ, ‘ಕಂದಾಯ ಶಾಖೆ ಮಹಿಳಾ ಅಧಿಕಾರಿ ಎಲ್ಲ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೆಲಸ ಮಾಡಬೇಕು’ ಎಂದರು. ಇದಕ್ಕೆ ಸದಸ್ಯರಾದ ಅಂಜಿನಪ್ಪ, ರೆಹಮಾನ್, ವೆಂಕಟೇಶ್ ಅವರೂ ಸಹಮತ ವ್ಯಕ್ತಪಡಿಸಿದರು.</p>.<p>ಮುಖ್ಯಾಧಿಕಾರಿ ಎರಗುಡಿ ಶಿವಕುಮಾರ್, ‘ವಿಷಯವನ್ನು ವೈಯಕ್ತಿಕವಾಗಿ ಪರಿಗಣಿಸದೆ ಪರಸ್ಪರ ಸಹಕಾರದಿಂದ ಕೆಲಸ ಮಾಡಬೇಕು’ ಎಂದು ಸಿಬ್ಬಂದಿಗೆ ಸೂಚಿಸಿದರು.</p>.<p>ಸದಸ್ಯರಾದ ಎಚ್.ಎಂ. ಅಶೋಕ್, ಜಾವಿದ್, ನಾಗರಾಜ್, ಕಿರಣ್, ಗಣೇಶ್, ರಾಘವೇಂದ್ರ ಶೆಟ್ಟಿ, ಪ್ರಕಾಶ್ ವಿವಿಧ ವಾರ್ಡ್ ಸದಸ್ಯರು ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>